ಬಸವಕಲ್ಯಾಣ: ತಾಲ್ಲೂಕಿನ ನಿರ್ಗುಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹೇಮರಡ್ಡಿ ಮಲ್ಲಮ್ಮನವರ ಜಯಂತಿಯ ದಿನಯಂದು ಹಳೆಯದಾಗಿರುವ ಹಾಗೂ ಹಾಳಾದ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಅವಮಾನ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಗುರುವಾರ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಹಳ್ಳದ್ ಅವರಿಗೆ ತಾಲ್ಲೂಕು ರೆಡ್ಡಿ ಸಮಾಜ ಸಂಘದಿಂದ ಮನವಿಪತ್ರ ಸಲ್ಲಿಸಲಾಯಿತು.
ಮುಖ್ಯಶಿಕ್ಷಕಿ ಮೀನಾ ಕುಮಾರಿ ಯವರು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದಾರೆ. ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ವಿಜಯಕುಮಾರ ರೆಡ್ಡಿ, ಹೇಮರೆಡ್ಡಿ ಗೌರೆ, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಂಜೀವರೆಡ್ಡಿ ಯರಬಾಗ, ಗುರುನಾಥರೆಡ್ಡಿ ಕುದಗೆ, ರಾಜರೆಡ್ಡಿ ನಾರಾಯಣಪುರ, ಅಶೋಕರೆಡ್ಡಿ ಕಿಟ್ಟಾ, ಯಲ್ಲಾರೆಡ್ಡಿ, ಸಾಯಿರೆಡ್ಡಿ, ಆಕಾಶರೆಡ್ಡಿ, ಗೋವಿಂದರೆಡ್ಡಿ, ಪ್ರಹ್ಲಾದರೆಡ್ಡಿ, ಕುಪೇಂದ್ರರೆಡ್ಡಿ ಇದ್ದರು.