ನವದೆಹಲಿಯಲ್ಲಿ ಇರುವ ಅಖಿಲ ಭಾರತೀಯ ಅಂಚೆ ನೌಕರರ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯೆ ಮಂಗಲಾ ಭಾಗವತ್ ಮಾತನಾಡಿ, ಸಂಘಟನೆ ನಮ್ಮಲ್ಲಿ ಧೈರ್ಯ, ಆತ್ಮವಿಶ್ವಾಸ ಮೂಡಿಸುತ್ತದೆ. ಎಲ್ಲರೂ ಒಂದೇ ಎಂಬ ಭಾವ ಬೆಳೆಸುತ್ತದೆ. ಎಲ್ಲ ಸಮಸ್ಯೆಗಳಿಗೂ ವಿರೋಧವೊಂದೇ ಪರಿಹಾರ ಅಲ್ಲ. ನ್ಯಾಯಯುತ ಬೇಡಿಕೆಗಳನ್ನು ಶಾಂತಿಯುತವಾಗಿ ಈಡೇರಿಸಿಕೊಳ್ಳೊಣ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿ, ಅಂಚೆ ಇಲಾಖೆಗೆ ಕೀರ್ತಿ ತರೋಣ ಎಂದರು.