ಜಿಲ್ಲೆಯ ಕಾರಂಜಾ ಹಾಗೂ ಪಕ್ಕದ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಹೆಚ್ಚುವರಿ ನೀರು ಹರಿ ಬಿಡುತ್ತಿರುವುದರಿಂದ ಶುಕ್ರವಾರ ಮತ್ತು ಶನಿವಾರವೂ ಮಾಂಜ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಿತ್ತು. ಇದರಿಂದ ನದಿ ಪಾತ್ರದ ಸಂಗಮ, ಹೆಡಗಾಪುರ, ನಿಟ್ಟೂರ, ಬಳತ, ಹಾಲಹಳ್ಳಿ, ಕೌಠಾ, ಮಣಿಗೆಂಪುರ, ಬಾಬಳಿ, ಬಾಚೆಪಳ್ಳಿ, ಲಾಧಾ ಹಾಗೂ ಕಂದಗೂಳ ಸೇರಿದಂತೆ ಹತ್ತಾರು ಹಳ್ಳಿಗಳ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ವ್ಯಾಪಕ ಹಾನಿ ಆಗಿದೆ.