ಬೀದರ್: ನೆರೆಯ ಮಹಾರಾಷ್ಟ್ರದ ಲಾತೂರ್ನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬೀದರ್ನ ವಾಯುಪಡೆ ತರಬೇತಿ ಕೇಂದ್ರದ ವಿಮಾನ ನಿಲ್ದಾಣಕ್ಕೆ ಬಂದು ಹೋದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮೋದಿ ಅವರನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ‘ರಾಜಕೀಯ ವಾತಾವರಣ ಹೇಗಿದೆ’ ಎಂದು ಮೋದಿ ಪ್ರಶ್ನಿಸಿದರು. ‘ಸರ್, ಗೆಲುವು ನಮ್ಮದೇ’ ಎಂದು ಶೈಲೇಂದ್ರ ಉತ್ತರಿಸಿದರು.
ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ, ಪಕ್ಷದ ಸಂಘಟನಾ ಪ್ರಮುಖ ದತ್ತಾತ್ರೇಯ ತೂಗಾಂವಕರ್ ಇದ್ದರು.