‘ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳು, ಔಷಧ ಅಂಗಡಿಗಳು, ಜಿಲ್ಲಾಡಳಿತ ಭವನ ಇದೇ ರಸ್ತೆಯಲ್ಲಿರುವುದರಿಂದ ಸಹಜವಾಗಿಯೇ ಜನದಟ್ಟಣೆ ಅಧಿಕವಾಗಿರುತ್ತದೆ. ಸಂಚಾರಕ್ಕೆ ತೊಡಕಾಗದ ಹಾಗೆ ಕಾಮಗಾರಿ ನಿರ್ವಹಿಸಬೇಕಾದ ಜವಾಬ್ದಾರಿ ಅಧಿಕಾರಿಗಳದ್ದು. ಆದರೆ, ಅವೈಜ್ಞಾನಿಕ ನಿರ್ವಹಣೆಯಿಂದ ಹೀಗಾಗಿದೆ. ಇದರಿಂದ ಹೆಚ್ಚಾಗಿ ರೋಗಿಗಳು ಪರದಾಡಬೇಕಾಗಿದೆ’ ಎಂದು ಚಿನ್ನಸ್ವಾಮಿ ಕಿಡಿಕಾರಿದರು.