ಬಾವಗಿ: ಗ್ರಾಮದಲ್ಲಿ ಜಿಟಿ ಜಿಟಿ ಮಳೆಯ ಮಧ್ಯೆಯೂ ಪೀರ್ಗಳ ಮೆರವಣಿಗೆ ನಡೆಯಿತು. ಇಸಾಕ್ ಸಾಹೇಬ್, ನಜೀರ್ ಸಾಹೇಬ್, ಮುಕ್ತಾರ್ ಸಾಹೇಬ್, ಗುರುಭದ್ರೇಶ್ವರ ಸಂಸ್ಥಾನ ಮಠದ ಭದ್ರಯ್ಯ ಸ್ವಾಮಿ, ಶಾಂತಕುಮಾರ ಸ್ವಾಮಿ, ಕಾಶೆಪ್ಪ ಅವಂಟಿ, ರೇವಣಪ್ಪ ಭದ್ರಣ್ಣ, ಯುವ ಮುಖಂಡ ಲೋಕೇಶ ಕನಶೆಟ್ಟಿ, ರಮೇಶ ಹಜರಿ, ಆನಂದ ಸ್ವಾಮಿ, ಗುಂಡಯ್ಯ ಸ್ವಾಮಿ, ಪ್ರಭು ಹಜ್ಜರಗಿ ಪಾಲ್ಗೊಂಡಿದ್ದರು. ಸಿರ್ಸಿ(ಎ) ಗ್ರಾಮದಲ್ಲಿ ನಡೆದ ಪೀರ್ಗಳ ಮೆರವಣಿಗೆಯಲ್ಲಿ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಪಾಲ್ಗೊಂಡರೆ, ಕಾಶೆಂಪುರ (ಪಿ) ಗ್ರಾಮದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶಾಸಕ ಬಂಡೆಪ್ಪ ಕಾಶೆಂಪುರ ಅಲಾಯಿ ಆಡಿ ಗಮನ ಸೆಳೆದರು.