‘ಪ್ರತಿವರ್ಷ ನೀರು ನಾಲೆಯಿಂದ ಹೊರಕ್ಕೆ ಹೋಗುತ್ತದೆ. ಆದರೆ, ಈ ಸಲ ಈ ಭಾಗದಲ್ಲಿ ಮಳೆ ಅಧಿಕ ಪ್ರಮಾಣದಲ್ಲಿ ಆಗಿದ್ದರಿಂದ ನೀರು ಹೆಚ್ಚಾಗಿ ಹರಿಯುತ್ತಿದೆ. ಅಲ್ಲದೆ ಮಕ್ಕಳಿಗೆ, ಯುವಕರಿಗೆ ಕೋವಿಡ್ ನಿರ್ಬಂಧದ ಕಾರಣ ಮನೆಯಲ್ಲಿ ಕುಳಿತು ಬೇಸರ ಆಗುತ್ತಿದೆ. ಆದ್ದರಿಂದ ಈ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜೈಭೀಮ ಕಾಂಬಳೆ ಹೇಳಿದ್ದಾರೆ.