ಬೀದರ್: ನಗರದ ಕುಂಬಾರವಾಡ ಕ್ರಾಸ್ನಲ್ಲಿ ತಮ್ಮ ಮನೆಯಲ್ಲಿ ಸಾಯಿ ಆದರ್ಶ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಕಾರ್ಯದರ್ಶಿ ಬಿ.ಜನಾರ್ಧನ್ ಗುರುವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಜಮೀನು ವಿವಾದದ ಕಾರಣ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಜನಾರ್ಧನ್ ಪತ್ನಿ ದೂರು ನೀಡಿದ್ದಾರೆ. ಶವ ಪರೀಕ್ಷೆ ಹಾಗೂ ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ತಿಳಿಸಿದ್ದಾರೆ.