‘ಕ್ಷೇತ್ರದ ಹೊರಗಿನವರಿಗೆ ಕಣಕ್ಕೆ ಇಳಿಸಿದ್ದರಿಂದ ಆ ಪಕ್ಷದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸ್ಥಳೀಯ ಸ್ವಾಭಿಮಾನಿ ಬಳಗದಿಂದ ನನಗೆ ಬೆಂಬಲ ದೊರಕುತ್ತಿದೆ. ಅಲ್ಲದೇ, ಎಲ್ಲ ಸಮುದಾಯಗಳ ಮತದಾರರು ನನ್ನನ್ನು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಕೆಲ ದಿನಗಳಲ್ಲಿಯೇ ಕ್ಷೇತ್ರದ ಚಿತ್ರಣ ಬದಲಾಗಿದ್ದು, ಬಿಜೆಪಿಯವರಿಗೆ ಇದು ನುಂಗಲಾರದ ತುತ್ತಾಗಿದೆ’ ಎಂದರು.