ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವು ದತ್ತು ಪಡೆದ ನಾಗಮಾರಪಳ್ಳಿ

Last Updated 1 ಆಗಸ್ಟ್ 2022, 14:31 IST
ಅಕ್ಷರ ಗಾತ್ರ

ಬೀದರ್: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಗೋವು ದತ್ತು ಪಡೆದಿದ್ದಾರೆ.

ಭಾಲ್ಕಿಯ ತುರುಗೈ ರಾಮಣ್ಣ ಗೋಶಾಲೆಯ ಗೋವು `ಬಸವ'ನನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆದಿದ್ದಾರೆ. ಈ ಸಂಬಂಧ ₹ 11,000 ಪಾವತಿಸಿದ್ದಾರೆ.

ಪುಣ್ಯಕೋಟಿ ದತ್ತು ಯೋಜನೆಯಡಿ ಸಾರ್ವಜನಿಕರೂ ಗೋವು ದತ್ತು ಪಡೆದು, ಗೋ ಸಂರಕ್ಷಣಾ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸೂರ್ಯಕಾಂತ ಅವರು ಹಿಂದೆ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆಯ ಗೋವನ್ನೂ ದತ್ತು ಪಡೆದಿದ್ದರು. ಶ್ರೀ ಉತ್ತರಾದಿ ಮಠ, ಗೋಶಾಲೆ, ಸುಕ್ಷೇತ್ರ ಮಳಖೇಡ, ನಾಡಿನ ಬೇರೆ ಬೇರೆ ಮಠಗಳ ಗೋವುಗಳನ್ನು ಸಹ ದತ್ತು ಪಡೆದಿದ್ದರು.

ಸೂರ್ಯಕಾಂತ ಅವರ ಪುತ್ರ ತರುಣ್ ಅವರು `ಲಕ್ಷ್ಮಿ' ಎಂಬ ಗೋವನ್ನು ದತ್ತು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT