ಬೀದರ್: ಕೋವಿಡ್ ಕಾರಣ ಜಿಲ್ಲೆಯಾದ್ಯಂತ ಶುಕ್ರವಾರ ನಾಗರ ಪಂಚಮಿಯನ್ನು ಸರಳವಾಗಿ ಆಚರಿಸಲಾಯಿತು. ಮಹಿಳೆಯರು ದೇವಸ್ಥಾನಗಳಿಗೆ ತೆರಳಿ ನಾಗದೇವತೆ ಮೂರ್ತಿ ಹಾಗೂ ಅರಳಿ ಮರದ ಕೆಳಗೆ ಇರುವ ಹುತ್ತಗಳಿಗೆ ಹಾಲು ಎರೆದು ಪೂಜೆ ಸಲ್ಲಿಸಿದರು.
ಜನವಾಡ ರಸ್ತೆ, ಲಾಡಗೇರಿ, ಪ್ರತಾಪನಗರ, ಶಿವನಗರ, ಹೂಗೇರಿ, ನೌಬಾದ್, ಗುಂಪಾ ಹಾಗೂ ಮೈಲೂರಲ್ಲಿ ಮಹಿಳೆಯರು ಹೊಸ ಬಟ್ಟೆಗಳನ್ನು ಧರಿಸಿ ನಾಗದೇವತೆಗೆ ಪೂಜೆ ಮಾಡಿದರು.
ಸಂಜೆ ಗ್ರಾಮಗಳಲ್ಲಿ ಹಬ್ಬದ ಶುಭ ಕೋರಿ ಮಹಿಳೆಯರು ದೇವಸ್ಥಾನಗಳ ಆವರಣದಲ್ಲಿ ಸೇರಿ ಬುಲಾಯಿ ಹಾಡುಗಳನ್ನು ಹಾಡಿದರು.