ದೀಪಾವಳಿ ಪ್ರಯುಕ್ತ ಕೆಲವರು ಲಕ್ಷ್ಮಿಪೂಜೆ ನೆರವೇರಿಸಿದರೆ, ಇನ್ನು ಕೆಲವರು ತುಳಸಿ ವಿವಾಹ ಮಾಡಿ ಭಕ್ತಿಭಾವ ಮೆರೆದರು. ಮಾರುಕಟ್ಟೆಯಲ್ಲಿ ಕಬ್ಬು, ಚೆಂಡು ಹೂವು, ಅಡಿಕೆ ಹೂವು, ಹುಣಸೆಕಾಯಿ, ನೆಲ್ಲಿಕಾಯಿ ಮಾರಾಟ ಭರದಿಂದ ನಡೆಯಿತು. ಭಗತ್ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ ಹಾಗೂ ಸಿದ್ಧಾರ್ಥ ಕಾಲೇಜು ಸಮೀಪದ ವೃತ್ತದಲ್ಲಿ ಖರೀದಿ ಭರಾಟೆ ಕಂಡು ಬಂದಿತು.