‘ಬೇಸಿಗೆಯಲ್ಲಿ ದೇಹದಿಂದ ಹೆಚ್ಚು ಬೆವರು ಸುರಿದಿದ್ದರೆ ನಿರ್ಜಲೀಕರಣದಿಂದ ವ್ಯಕ್ತಿ ಸಾವಿಗೀಡಾಗುವ ಸಾಧ್ಯತೆ ಇರುತ್ತದೆ. ಆದರೆ, ಯಮುನಾಬಾಯಿ ದೇಹದಲ್ಲಿ ನಿರ್ಜಲೀಕರಣ ಕಂಡು ಬಂದಿಲ್ಲ. ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ’ ಎಂದು ಕಮಲನಗರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಿಲ ಬಾಚಪಳ್ಳಿ ತಿಳಿಸಿದ್ದಾರೆ.