ಬೀದರ್: ರೈತ ಹಾಗೂ ಕಾರ್ಮಿಕ ವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕು ಎಂದು ಕಲ್ಯಾಣ ಕರ್ನಾಟಕ ವೇದಿಕೆ ಒತ್ತಾಯಿಸಿದೆ.
ವೇದಿಕೆಯ ಪದಾಧಿಕಾರಿಗಳು ನಗರದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರನ್ನು ಭೇಟಿ ಮಾಡಿ ಪ್ರಧಾನಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.
ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ವಾಲಿಕಾರ್, ಉಸ್ತುವಾರಿ ಬಸವರಾಜ ಧರಂಪುರ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಓಂಪ್ರಕಾಶ ಜಿ.ಕೆ., ಮುಖಂಡರಾದ ಸಂತೋಷ ಬರೂರಕರ್, ಲೋಕೇಶ ಎಖ್ಖೆಳ್ಳಿಕರ್, ಆನಂದ ಶೇಕಾಪುರ, ನರಸಿಂಹಲು, ಬೋಯಿನ್, ಸುದೀಪ್ ಗುಣಗೊಂಡ ಇದ್ದರು.