ಜನವಾಡ: ಸಾವಯವ ಪದಾರ್ಥಗಳ ಸೇರ್ಪಡೆಯಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಜತೆಗೆ ಬೆಳೆಗಳ ಉತ್ಪಾದ ನೆಯೂ ವೃದ್ಧಿಸುತ್ತದೆ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎಸ್.ವಿ. ಪಾಟೀಲ ಹೇಳಿದರು.
ವಿಶ್ವ ಮಣ್ಣು ದಿನದ ಪ್ರಯುಕ್ತ ಆರೋಗ್ಯಯುಕ್ತ ಮಣ್ಣಿಗಾಗಿ ವೈಜ್ಞಾನಿಕ ನಿರ್ವಹಣಾ ಕ್ರಮಗಳ ಕುರಿತು ಬೀದರ್ ತಾಲ್ಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಪ್ರವೀಣ ನಾಯಿಕೊಡಿ, ಹುಮನಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ. ಪಾಟೀಲ, ತೋಟಗಾರಿಕೆ ವಿಸ್ತರಣಾ ಘಟಕದ ವಿಸ್ತರಣಾ ಮುಂದಾಳು ಡಾ. ಎನ್. ಶ್ರೀನಿವಾಸ ಅವರು ಮಣ್ಣಿನ ಫಲವತ್ತತೆ ಮಹತ್ವ ಕುರಿತು ಮಾಹಿತಿ ನೀಡಿದರು.
ಡಾ.ಎ.ಜಿ. ಪಾಟೀಲ, ಡಾ.ಎಂ.ರಾಜಕುಮಾರ, ಡಾ. ಪ್ರಶಾಂತ, ಪ್ರಾಣೇಶ ಬಿರಾದಾರ, ಅರ್ಜುನ ಮೆಸ್ಸಿ, ಚಂದ್ರಕಾಂತ ಬೆಲ್ದಾಳೆ, ಮಲ್ಲಿಕಾರ್ಜುನ, ವಿಠ್ಠಲ ಚಿಂಚೋಳಿ, ಸೋಮನಾಥ ಜ್ಯಾಂತೆ, ಬಾಬುರಾವ್, ತಾನಾಜಿ ಇದ್ದರು.
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ರಿಲಯನ್ಸ್ ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮ ನಡೆಸಲಾಯಿತು.