ಬೀದರ್: ಕಲಾತ್ಮಕ ಆಭರಣಗಳ ಪ್ರದರ್ಶನ ಹಾಗೂ ಮಾರಾಟ ನಗರದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಮಳಿಗೆಯಲ್ಲಿ ಶುಕ್ರವಾರ ಆರಂಭವಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಚಾಲನೆ ನೀಡಿ ಮಾತನಾಡಿ, ‘ಜಿಲ್ಲೆಯ ಜನರಿಗೆ ಇದೊಂದು ಹೊಸ ಅನುಭವ ನೀಡಲಿದೆ. ಆಸಕ್ತರಿಗೆ ಆಭರಣಗಳನ್ನು ಖರೀದಿಸಲು ಅನುಕೂಲವಾಗಿದೆ’ ಎಂದು ಹೇಳಿದರು.
ಬೀದರ್ ಶಾಖೆಯ ಮುಖ್ಯಸ್ಥ ಸರ್ಫರಾಜ್ ಮಾತನಾಡಿ, ‘ಪ್ರದರ್ಶನದಲ್ಲಿರುವ ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ಆಭರಣಗಳು ಹಾಗೂ ಕೈ ಕುಶಲತೆಯ ಸೊಬಗಿನ ಪಾರಂಪರಿಕ ಆಭರಣಗಳು ಮಾರಾಟಕ್ಕೆ ಲಭ್ಯ ಇವೆ’ ಎಂದು ತಿಳಿಸಿದರು.
ಮಾಜಿ ಶಾಸಕ ಅಶೋಕ ಖೇಣಿ, ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್, ಡಾ.ಶಾರದಾ ಗುದುಗೆ, ಮಲಬಾರ್ ಗೋಲ್ಡ್ ನ ಕಲಬುರ್ಗಿ ಶಾಖೆಯ ಮನ್ಸೂರ್ ಇದ್ದರು.