ಬೀದರ್: ಭಾರತೀಯ ಜನತಾ ಪಾರ್ಟಿ ಬೀದರ್ ನಗರ ಮಂಡಲ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ನಗರದ ಗಣೇಶ ಮೈದಾನದಲ್ಲಿ 72 ಅರಳಿ ಮರದ ಸಸಿಗಳನ್ನು ನೆಡಲಾಯಿತು.
ನಗರ ಮಂಡಲದ ಅಧ್ಯಕ್ಷ ಶಶಿಧರ ಹೊಸಳ್ಳಿ, ಬುಡಾ ಅಧ್ಯಕ್ಷ ಬಾಬು ವಾಲಿ, ರೇವಣಸಿದ್ದಪ್ಪ ಜಲಾದೆ, ನಗರಸಭೆ ಸದಸ್ಯರಾದ ಚಂದ್ರಶೇಖರ ಪಾಟೀಲ ಗಾದಗಿ, ಸುಭಾಷ ಮಡಿವಾಳ, ಗಣೇಶ ಬೋಸ್ಲೆ , ನಿತಿನ್ ನವಲಕೆರೆ , ಸಂದೀಪ ಪಾಟೀಲ , ರೋಷನ್ ವರ್ಮಾ, ನಿತಿನ್ ಕಪ್ರೂರ್ ಇದ್ದರು.