ಹುಮನಾಬಾದ್: ತಮ್ಮ ಮೊನಚಾದ ಲೇಖನ, ಭಾಷಣಗಳಲ್ಲದೆ ಸಾಮಾಜಿಕ ಚಳವಳಿಗಳಲ್ಲಿಯು ಪ್ರೊ. ಚಂಪಾ ಅವರು ಸದಾ ಮುಂಚೂಣಿಯಲ್ಲಿ ಇರುತ್ತಿ ದ್ದರು ಎಂದು ಕಸಾಪ ಮಾಜಿ ಅಧ್ಯಕ್ಷ ವೀರಂತರೆಡ್ಡಿ ಜಂಪಾ ಹೇಳಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಬಾಲಕರ ಪ್ರೌಢ ವಿಭಾಗದಲ್ಲಿ ಧರಿನಾಡು ಕನ್ನಡ ಸಂಘದಿಂದ ನಡೆದ ಚಂಪಾ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಸಾಹಿತಿ ಕಾಶಿನಾಥ ರೆಡ್ಡಿ ಅವರು ಮಾತನಾಡಿ, ಚಂಪಾ ಅವರು ಕನ್ನಡ ಕಟ್ಟುವ ಕೆಲಸದಲ್ಲಿ ನಿರಂತವಾಗಿ, ಇತರ ಅನೇಕ ಯುವ ಬರಹಗಾರರಿಗೆ ಸ್ಪೂರ್ತಿಯಾಗಿ ಅವರ ಬೆಳವಣಿಗೆಗೆ ಪ್ರೋತ್ಸಾಹಿಸುತ್ತಿದ್ದರು ಎಂದರು.
ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಹಾಗೂ ರಾಜ್ಯ ಗೋಂಧಳಿ ಸಮಾಜ ಸಂಘಟನೆಯ ಅಧ್ಯಕ್ಷ ಸಿದ್ರಾಮ ವಾಘ ಮಾರೆ ಮಾತನಾಡಿದರು.
ಸಂಘದ ಅಧ್ಯಕ್ಷ ಸಿದ್ಧಾರ್ಥ ಮಿತ್ರಾ, ಡಾ.ಕೆ.ಚಂದ್ರಕಾಂತ, ಸಂಗಮ್ಮ ಸಜ್ಜನ, ಶೇಖ ಮಹಿಬೂಬ ಪಟೇಲ್, ರವಿ ಮಲಶೆಟ್ಟಿ, ತ್ರಿವೇಣಿ ಗಂಟಕರ, ಬಷಿರುದ್ದಿನ್ ಇದ್ದರು.