ಬಸವಕಲ್ಯಾಣ: ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಶೀಘ್ರ ಘೋಷಣೆಯಾಗುವ ಸಾಧ್ಯತೆಯಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಇಲ್ಲಿನ ಮಾಜಿ ಶಾಸಕ ಎಂ.ಜಿ.ಮುಳೆಯವರು ರಾಜಕೀಯ ಚಟುವಟಿಕೆ ಚುರುಕುಗೊಳಿಸಿದ್ದು ಜನವರಿ 18ಕ್ಕೆ ತಮ್ಮ ನಿವಾಸದಲ್ಲಿ ಚಹಾಕೂಟ ಏರ್ಪಡಿಸಿ, ಆತ್ಮೀಯರನ್ನು ಆಹ್ವಾನಿಸಿರುವುದು ಜನರ ಕುತೂಹಲಕ್ಕೆ ಕಾರಣವಾಗಿದೆ.