ಬೀದರ್: ನಾವದಗೇರಿ ಹಾಗೂ ಚಿಟ್ಟಾದ ಮೆಥೋಡಿಸ್ಟ್ ಚರ್ಚ್ನ ಆವರಣದಲ್ಲಿ ಖರ್ಜೂರ ಗರಿಗಳ ಹಬ್ಬವನ್ನು ಆಚರಿಸಲಾಯಿತು.
ಕ್ರೈಸ್ತ ಸಮುದಾಯದವರು ಯೇಸು ವೇಷಧಾರಿ ಹಾಗೂ ಖರ್ಜೂರ ಗಿಡದ ಗರಿಗಳನ್ನು ಕತ್ತೆಗಳ ಮೇಲೆ ಇಟ್ಟು ಮೆರವಣಿಗೆ ಮಾಡಿದರು.
ಯಹೂದಿಗಳು ಯೇಸುವನ್ನು ಕೊಲ್ಲಲು ಸಂಚು ರೂಪಿಸುತ್ತಾರೆ. ಯೇಸು ದಾಳಿಯನ್ನು ಎದುರಿಸಲು ಕುದುರೆಯ ಬದಲು ಸೌಮ್ಯ ಸ್ವಭಾವದ ಕತ್ತೆಯ ಮೇಲೆ ಕುಳಿತು ಜೇರುಸಲೇಂ ನಗರವನ್ನು ಪ್ರವೇಶ ಮಾಡುತ್ತಾರೆ. ಇದು ಯೇಸು ಪಾಲಿಗೆ ಕೊನೆಯ ಪ್ರಯಾಣವಾಗುತ್ತದೆ. ಈ ಪ್ರಯುಕ್ತ ಹಬ್ಬವನ್ನು ಆಚರಿಸಲಾಗು