<p>ಭಾಲ್ಕಿ: ‘ಪ್ರತಿಯೊಬ್ಬರೂ ಪ್ರತಿದಿನ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಭಗವಂತನನ್ನು ಒಲಿಸಿಕೊಳ್ಳಬಹುದು’ ಎಂದು ತಡೋಳಾ, ಮೆಹಕರ ಕಟ್ಟಿಮನಿ ಸಂಸ್ಥಾನದ ಪೀಠಾಧಿಪತಿ ರಾಜೇಶ್ವರ ಶಿವಾಚಾರ್ಯರು ಹೇಳಿದರು.</p>.<p>ಇಲ್ಲಿಯ ಭಾಲ್ಕೇಶ್ವರ ದೇವಾಲಯದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆದ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ಉತ್ತಮ ಸಂಸ್ಕಾರ, ಸಂಗತಿ ಎಂಥವರನ್ನೂ ಸದ್ಗುಣಿಗಳನ್ನಾಗಿಸುತ್ತವೆ. ಹಾಗಾಗಿ, ಬದುಕಿನಲ್ಲಿ ಎಲ್ಲರೂ ಒಳ್ಳೆಯವರ ಸಂಗದಲ್ಲಿ ಇರಬೇಕು. ಏಕಾಗ್ರತೆ, ಮಾನಸಿಕ ನೆಮ್ಮದಿ, ಸಂತೃಪ್ತಿ ಪಡೆಯಲು ಪ್ರತಿದಿನ ದೇವರ ಧ್ಯಾನ, ಲಿಂಗಪೂಜೆ, ಭಜನೆ, ಕೀರ್ತನೆಯಲ್ಲಿ ತೊಡಗಬೇಕು ಎಂದು ತಿಳಿ ಹೇಳಿದರು.</p>.<p>ಮಾಜಿ ಶಾಸಕ ಪ್ರಕಾಶ ಖಂಡ್ರೆ, ಎನ್ಎಸ್ಎಸ್ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಪ್ರಮುಖರಾದ ಶಿವಲಿಂಗ ಕುಂಬಾರ, ಅಶೋಕ ಲೋಖಂಡೆ, ಜೈಕಿಶನ್ ಬಿಯಾಣಿ, ಪ್ರಸನ್ನ ಖಂಡ್ರೆ, ಡಾ.ವಸಂತ ಪವಾರ್, ಸಾಗರ ಮಾಲಾನಿ, ಜೈಲೇಶ ಮಾಲಪಾಣಿ, ಪ್ರಿಯಾ ಎಂ.ದಶಮುಖೆ ಹಾಗೂ ಚಂದ್ರಕಾಂತ ತಳವಾಡೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾಲ್ಕಿ: ‘ಪ್ರತಿಯೊಬ್ಬರೂ ಪ್ರತಿದಿನ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಭಗವಂತನನ್ನು ಒಲಿಸಿಕೊಳ್ಳಬಹುದು’ ಎಂದು ತಡೋಳಾ, ಮೆಹಕರ ಕಟ್ಟಿಮನಿ ಸಂಸ್ಥಾನದ ಪೀಠಾಧಿಪತಿ ರಾಜೇಶ್ವರ ಶಿವಾಚಾರ್ಯರು ಹೇಳಿದರು.</p>.<p>ಇಲ್ಲಿಯ ಭಾಲ್ಕೇಶ್ವರ ದೇವಾಲಯದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆದ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ಉತ್ತಮ ಸಂಸ್ಕಾರ, ಸಂಗತಿ ಎಂಥವರನ್ನೂ ಸದ್ಗುಣಿಗಳನ್ನಾಗಿಸುತ್ತವೆ. ಹಾಗಾಗಿ, ಬದುಕಿನಲ್ಲಿ ಎಲ್ಲರೂ ಒಳ್ಳೆಯವರ ಸಂಗದಲ್ಲಿ ಇರಬೇಕು. ಏಕಾಗ್ರತೆ, ಮಾನಸಿಕ ನೆಮ್ಮದಿ, ಸಂತೃಪ್ತಿ ಪಡೆಯಲು ಪ್ರತಿದಿನ ದೇವರ ಧ್ಯಾನ, ಲಿಂಗಪೂಜೆ, ಭಜನೆ, ಕೀರ್ತನೆಯಲ್ಲಿ ತೊಡಗಬೇಕು ಎಂದು ತಿಳಿ ಹೇಳಿದರು.</p>.<p>ಮಾಜಿ ಶಾಸಕ ಪ್ರಕಾಶ ಖಂಡ್ರೆ, ಎನ್ಎಸ್ಎಸ್ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಪ್ರಮುಖರಾದ ಶಿವಲಿಂಗ ಕುಂಬಾರ, ಅಶೋಕ ಲೋಖಂಡೆ, ಜೈಕಿಶನ್ ಬಿಯಾಣಿ, ಪ್ರಸನ್ನ ಖಂಡ್ರೆ, ಡಾ.ವಸಂತ ಪವಾರ್, ಸಾಗರ ಮಾಲಾನಿ, ಜೈಲೇಶ ಮಾಲಪಾಣಿ, ಪ್ರಿಯಾ ಎಂ.ದಶಮುಖೆ ಹಾಗೂ ಚಂದ್ರಕಾಂತ ತಳವಾಡೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>