ಮುಖ್ಯ ಶಿಕ್ಷಕರಾಗಿ ಶಾಲಾ ನಿರ್ವಹಣೆಯ ಜೊತೆಗೆ ಕನ್ನಡ, ಇಂಗ್ಲಿಷ್ ಎರಡು ಭಾಷೆಯ ಬೋಧನೆಯನ್ನು ಮಾಡುತ್ತಿದ್ದರು. ಕೆಲಸದಲ್ಲಿನ ಅವರ ಶ್ರದ್ಧೆ ನಮಗೆ ಮಾರ್ಗದರ್ಶಿಯಾಗಿತ್ತು. ರಸವತ್ತಾದ ಕಾವ್ಯ ವಾಚನ, ತನ್ಮಯರನ್ನಾಗಿಸುವ ವಿವರಣೆಯ ಸಮಗ್ರತೆ, ಕ್ರಿಯಾತ್ಮಕ ವ್ಯಾಕರಣ ಬೋಧನೆ, ಅಚ್ಚುಕಟ್ಟಾದ ಅಧ್ಯಯನ ಶ್ರದ್ಧೆ... ನಮ್ಮನ್ನು ಕೇವಲ ಪರೀಕ್ಷೆಗಷ್ಟೇ ಅಣಿಗೊಳಿಸದೆ ಬದುಕಿನುದ್ದಕ್ಕೂ ಆ ಮೌಲ್ಯವನ್ನು ಕಲಿಸಿತು. ಅವರಿಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ.
ನಾಗರಾಜ ಮಗ್ಗದ, ಕೊಟ್ಟೂರು