‘ರಮೇಶ ಸ್ವಾಮಿ ಯಾವಾಗಲೂ ಅಕ್ಕನ ರಕ್ಷಣೆಗೆ ಇರುತ್ತಿದ್ದ. ದೇವರ ಪೂಜೆಯನ್ನೂ ಮಾಡುತ್ತಿದ್ದರು. ಇದು ರಮೇಶ ಸ್ವಾಮಿ ಅಕ್ಕನ ಮೈದುನ ಕುಟುಂಬದವರಿಗೆ ತಲೆನೋವು ಆಗಿತ್ತು. ಈ ಕಾರಣಕ್ಕಾಗಿಯೇ ಕೊಲೆ ಮಾಡಿರುವ ಶಂಕೆ ಇದೆ. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ತಿಳಿಸಿದ್ದಾರೆ.