ಬಸವಕಲ್ಯಾಣ: ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸಿರುವುದನ್ನು ಖಂಡಿಸಿ ಬಿಜೆಪಿ ತಾಲ್ಲೂಕು ಘಟಕದಿಂದ ಸೋಮವಾರ ಇಲ್ಲಿನ ಡಾ.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ನವರು ವಿವಿಧ ಯೋಜನೆಗಳನ್ನು ಉಚಿತವಾಗಿ ನೀಡುವುದಾಗಿ ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದಾಗ ಈಗ ದರ ಏರಿಕೆ ಮಾಡಿ ಜನರ ಮೇಲಿನ ಹೊರೆ ಹೆಚ್ಚಿಸುತ್ತಿದ್ದಾರೆ. ಹಾಲಿನ ಖರೀದಿ ದರವೂ ಕಡಿಮೆ ಮಾಡಲಾಗಿದೆ. ಗೋಹತ್ಯೆಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಅಧ್ಯಕ್ಷ ಅರವಿಂದ ಮುತ್ತೆ, ದಿಗಂಬರ ಜಲ್ದೆ, ಪ್ರದೀಪ ಗಡವಂತೆ, ಶಿವಕುಮಾರ ಸೀತಾರ, ಜ್ಞಾನೇಶ್ವರ ಮೂಳೆ, ಅಮೀರೊದ್ದೀನ್, ಸತೀಶ ರಾಠೋಡ ಮತ್ತಿತರರು ಪಾಲ್ಗೊಂಡಿದ್ದರು.