ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಹೆಸರಲ್ಲಿ ಪ್ರಮಾಣಪತ್ರ ಪಡೆಯುವವರು ಹಾಗೂ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ವಾಲ್ಮೀಕಿ ಸಮಾಜ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಶರಥ ಜಮಾದಾರ ಬಟಗೇರಾವಾಡಿ, ತಾಲ್ಲೂಕು ಘಟಕದ ಅಧ್ಯಕ್ಷ ದಿಲೀಪ್ ಜಮಾದಾರ, ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಜಮಾದಾರ, ಭೀಮ್ ಆರ್ಮಿ ಅಧ್ಯಕ್ಷ ಚೇತನ ಕಾಡೆ, ಬಿಎಸ್ಪಿ ತಾಲ್ಲೂಕು ಘಟಕದ ಅಧ್ಯಕ್ಷ ಮಾರುತಿ ಕಾಂಬಳೆ, ದತ್ತು ಸುಂಠಾಣೆ, ಸುಭಾಷ ಜಮಾದಾರ, ಬಾಬುರಾವ್ ಜಾಜನಮುಗಳಿ, ಬಲಭೀಮಶಾ ಜಮಾದಾರ, ಮಹಾದೇವ, ಚಂದ್ರಕಾಂತ, ದತ್ತು, ಲಕ್ಷ್ಮಣ ಭೋಸ್ಲೆ ಹಾಗೂ ಯಲ್ಲಾಲಿಂಗ ಇದ್ದರು.