ಚಂದ್ರಕಾಂತ ಗುದಗೆ ಪೊಲೀಸ್ ಠಾಣೆಗೆ ಪಿಸ್ತೂಲ್ ಒಪ್ಪಿಸಿ ರಸೀದಿ ಪಡೆದುಕೊಂಡಿದ್ದರು. ಪಿಸ್ತೂಲ್ ತರಲು ಈಚೆಗೆ ಠಾಣೆಗೆ ಹೋದಾಗ ‘ಕಳೆದು ಹೋಗಿದೆ’ ಎಂದು ಹೇಳಿ ಪಿಎಸ್ಐ ಅಸಹಾಯಕತೆ ವ್ಯಕ್ತಪಡಿಸಿದರು. ಚಂದ್ರಕಾಂತ ನೀಡಿದ ಆಧಾರ ಮೇಲೆ ವಿಚಾರಣೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅಮಾನತುಗೊಳಿಸಿದ್ದಾರೆ.