ಬೀದರ್: ನೆರೆ ರಾಜ್ಯಗಳಿಂದ ಬಂದು ಇಲ್ಲಿಯ ನೌಬಾದ್ನ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಕ್ವಾರಂಟೈನ್ನಲ್ಲಿ ಇರುವವರಿಗೆ ಪುಟ್ಟಪುರ್ತಿ ಸಾಯಿಬಾಬಾ ಎಜಕೇಶನ್ ಸೋಸೈಟಿ ವತಿಯಿಂದ ಆಮ್ಲ ಕಷಾಯ, ಅಶ್ವಗಂಧಯುಕ್ತ ಪೌಡರ್, ಚವನ್ಪ್ರಾಶ್, ಅಣುತೈಲ ಹಾಗೂ ಸಂಜೀವಿನಿ ವಟಿ ಮಾತ್ರೆಗಳನ್ನು ವಿತರಿಸಲಾಯಿತು.
ಸೋಸೈಟಿ ಅಧ್ಯಕ್ಷೆ ಡಾ. ಸುಜಾತಾ ಹೊಸಮನಿ, ನೌಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಪ್ರಜ್ಞಾ, ಪ್ರಗತಿ ಆರೋಗ್ಯ ಮತ್ತು ಪಂಚಕರ್ಮ ಹೆಲ್ತ್ ಸೆಂಟರ್ನ ಡಾ. ಸತೀಶ ಭೋಸ್ಲೆ, ಶಾರದಾ ಮಾಳಗೆ ಇದ್ದರು.