<p><strong>ಬೀದರ್</strong>: ಅಭಿವೃದ್ಧಿಯ ಹೆಸರಲ್ಲಿ ನಿಕೋಬಾರ್ ದ್ವೀಪದ ಲಕ್ಷಾಂತರ ವೃಕ್ಷಗಳಿಗೆ ಕೊಡಲಿ ಪೆಟ್ಟು ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೋರಾಟಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಬೆಂಬಲ ವ್ಯಕ್ತಪಡಿಸಿದ್ದಾರೆ.</p>.<p>‘ಕೇಂದ್ರ ಸರ್ಕಾರ ಉದ್ಯಮಪತಿಗಳಿಗ ಅನುಕೂಲ ಮಾಡಿಕೊಡಲು ಲಕ್ಷಾಂತರ ಗಿಡಗಳ ಮಾರಣ ಹೋಮ ಮಾಡಲು, ಜೀವವೈವಿಧ್ಯ ನಾಶಪಡಿಸಲು ಮುಂದಾಗಿರುವುದು ಖಂಡನೀಯ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರ ಪ್ರಕೃತಿ, ಪರಿಸರದ ಕಾಳಜಿಗೆ ತಾವು ಬೆಂಬಲ ನೀಡುತ್ತೇನೆ’ಎಂದು ಹೇಳಿದ್ದಾರೆ.</p>.<p>‘ಇಂದು ಇಡೀ ಮಾನವಕುಲ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಕಾಲಘಟ್ಟದಲ್ಲಿದ್ದು, ಹೆಚ್ಚುತ್ತಿರುವ ಬಿಸಿ ಮತ್ತು ಋತುಮಾನಗಳ ವ್ಯತ್ಯಯದಿಂದ ನಲುಗಿ ಹೋಗಿದೆ. ಪ್ರಕೃತಿಯೂ ಉಳಿಯಬೇಕು, ಅಭಿವೃದ್ಧಿಯೂ ಆಗಬೇಕು, ಸುಸ್ಥಿರ ಅಭಿವೃದ್ಧಿ ಆಗಬೇಕು. ಆದರೆ, ಯಾರದೋ ಹಿತ ಕಾಯಲು ಪ್ರಕೃತಿ, ಜೀವಿವೈವಿಧ್ಯದ ನಾಶ ಮಾಡುವುದು ಸರಿಯಲ್ಲ’ ಎಂದಿದ್ದಾರೆ.</p>.<p>‘ನಿಕೋಬಾರ್ ದ್ವೀಪದ 160 ಚದರ ಕಿಲೋ ಮೀಟರ್ ಅರಣ್ಯದಲ್ಲಿ ಲಕ್ಷಾಂತರ ಮರ, ಗಿಡ ಕಡಿದರೆ ಅದು ಪ್ರಕೃತಿ ವಿಕೋಪಕ್ಕೆ ನಾಂದಿ ಹಾಡುತ್ತದೆ. ಜೀವವೈವಿಧ್ಯದ ನಿರ್ನಾಮ ಆಗುತ್ತದೆ. ಸ್ಥಳೀಯರ ಬದುಕೂ ದುರ್ಬರವಾಗುತ್ತದೆ. ಈ ನಿಟ್ಟಿನಲ್ಲಿ ಧ್ವನಿ ಎತ್ತಿರುವ ರಾಹುಲ್ ಗಾಂಧಿ ಅವರೊಂದಿಗೆ ದೇಶದ ಎಲ್ಲ ಪರಿಸರ ಪ್ರೇಮಿಗಳು ನಿಲ್ಲುತ್ತಾರೆ’ ಎಂಬ ವಿಶ್ವಾಸವಿದೆ’ ಎಂದು ಹೇಳಿದ್ದಾರ</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260430-33-524161793</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಅಭಿವೃದ್ಧಿಯ ಹೆಸರಲ್ಲಿ ನಿಕೋಬಾರ್ ದ್ವೀಪದ ಲಕ್ಷಾಂತರ ವೃಕ್ಷಗಳಿಗೆ ಕೊಡಲಿ ಪೆಟ್ಟು ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೋರಾಟಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಬೆಂಬಲ ವ್ಯಕ್ತಪಡಿಸಿದ್ದಾರೆ.</p>.<p>‘ಕೇಂದ್ರ ಸರ್ಕಾರ ಉದ್ಯಮಪತಿಗಳಿಗ ಅನುಕೂಲ ಮಾಡಿಕೊಡಲು ಲಕ್ಷಾಂತರ ಗಿಡಗಳ ಮಾರಣ ಹೋಮ ಮಾಡಲು, ಜೀವವೈವಿಧ್ಯ ನಾಶಪಡಿಸಲು ಮುಂದಾಗಿರುವುದು ಖಂಡನೀಯ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರ ಪ್ರಕೃತಿ, ಪರಿಸರದ ಕಾಳಜಿಗೆ ತಾವು ಬೆಂಬಲ ನೀಡುತ್ತೇನೆ’ಎಂದು ಹೇಳಿದ್ದಾರೆ.</p>.<p>‘ಇಂದು ಇಡೀ ಮಾನವಕುಲ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಕಾಲಘಟ್ಟದಲ್ಲಿದ್ದು, ಹೆಚ್ಚುತ್ತಿರುವ ಬಿಸಿ ಮತ್ತು ಋತುಮಾನಗಳ ವ್ಯತ್ಯಯದಿಂದ ನಲುಗಿ ಹೋಗಿದೆ. ಪ್ರಕೃತಿಯೂ ಉಳಿಯಬೇಕು, ಅಭಿವೃದ್ಧಿಯೂ ಆಗಬೇಕು, ಸುಸ್ಥಿರ ಅಭಿವೃದ್ಧಿ ಆಗಬೇಕು. ಆದರೆ, ಯಾರದೋ ಹಿತ ಕಾಯಲು ಪ್ರಕೃತಿ, ಜೀವಿವೈವಿಧ್ಯದ ನಾಶ ಮಾಡುವುದು ಸರಿಯಲ್ಲ’ ಎಂದಿದ್ದಾರೆ.</p>.<p>‘ನಿಕೋಬಾರ್ ದ್ವೀಪದ 160 ಚದರ ಕಿಲೋ ಮೀಟರ್ ಅರಣ್ಯದಲ್ಲಿ ಲಕ್ಷಾಂತರ ಮರ, ಗಿಡ ಕಡಿದರೆ ಅದು ಪ್ರಕೃತಿ ವಿಕೋಪಕ್ಕೆ ನಾಂದಿ ಹಾಡುತ್ತದೆ. ಜೀವವೈವಿಧ್ಯದ ನಿರ್ನಾಮ ಆಗುತ್ತದೆ. ಸ್ಥಳೀಯರ ಬದುಕೂ ದುರ್ಬರವಾಗುತ್ತದೆ. ಈ ನಿಟ್ಟಿನಲ್ಲಿ ಧ್ವನಿ ಎತ್ತಿರುವ ರಾಹುಲ್ ಗಾಂಧಿ ಅವರೊಂದಿಗೆ ದೇಶದ ಎಲ್ಲ ಪರಿಸರ ಪ್ರೇಮಿಗಳು ನಿಲ್ಲುತ್ತಾರೆ’ ಎಂಬ ವಿಶ್ವಾಸವಿದೆ’ ಎಂದು ಹೇಳಿದ್ದಾರ</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260430-33-524161793</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>