ರಸ್ತೆಯ ಮೇಲೆ ಅಪಾರ ಪ್ರಮಾಣದಲ್ಲಿ ನೀರು ನಿಂತು ಕೆಲ ಕಾಲ ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ರೋಟರಿ ವೃತ್ತ , ಡಾ.ಅಂಬೇಡ್ಕರ್ ವೃತ್ತ, ಮೈಲೂರು ಕ್ರಾಸ್ ಹಾಗೂ ಹಾರೂರಗೇರಿ ಕ್ರಾಸ್ ಬಳಿ ರಸ್ತೆ ಮೇಲೆ ನೀರು ನಿಂತುಕೊಂಡಿತ್ತು. ಬೀದರ್ ತಾಲ್ಲೂಕಿನ ಮನ್ನಳ್ಳಿ ಹೋಬಳಿಯಲ್ಲೂ ಉತ್ತಮ ಮಳೆ ಸುರಿಯಿತು. ಬಾಡುತ್ತಿರುವ ಬೆಳೆಗೆ ಜೀವ ಕಳೆ ಬಂದಿತು. ಹಳ್ಳಿಗಳಲ್ಲಿ ನೀರು ಸಂಗ್ರಹವಾಗಿ ಕೆಸರು ಸೃಷ್ಟಿಯಾಗಿತ್ತು.