<p><strong>ಬೀದರ್:</strong> ಕೋವಿಡ್ ನಂತರ ಗರಿಗೆದರಿದ್ದ ನಿರ್ಮಾಣ ಚಟುವಟಿಕೆಗಳು ಬೀದರ್ ನಗರದಲ್ಲಿ ಬಹುತೇಕ ಇನ್ನಿಲ್ಲದಂತೆ ಸ್ಥಗಿತಗೊಂಡಿವೆ.</p>.<p>ಅನೇಕ ಹೊಸ ಹೊಸ ಲೇಔಟ್ಗಳು ನಿರ್ಮಾಣವಾಗುತ್ತಿವೆ. ಆದರೆ, ಅಲ್ಲೆಲ್ಲ ಕಟ್ಟಡಗಳೇ ನಿರ್ಮಾಣವಾಗುತ್ತಿಲ್ಲ. ಅದರ ನೇರ ಪರಿಣಾಮ ರಿಯಲ್ ಎಸ್ಟೇಟ್ ಮೇಲೂ ಬಿದ್ದಿದೆ.</p>.<p>ಹಾಲಿ ಇರುವ ಹಲವು ಲೇಔಟ್ಗಳಲ್ಲಿ ನಿವೇಶನಗಳು ಬಿಕರಿ ಆಗುತ್ತಿಲ್ಲ. ಹೊಸಬರು ಹೊಸ ಲೇಔಟ್ ನಿರ್ಮಿಸಲು ಹತ್ತು ಹಲವು ಸಲ ಯೋಚಿಸುವಂತೆ ಮಾಡಿದೆ. ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ಲೇಔಟ್ ನಿರ್ಮಿಸಿದವರನ್ನು ಇದು ಚಿಂತೆಗೀಡು ಮಾಡಿದೆ.</p>.<p>ಕೃಷಿ ಜಮೀನು ಕೃಷಿಯೇತರ ಜಮೀನಾಗಿ ಪರಿವರ್ತಿಸಿ, ನಿವೇಶನಗಳನ್ನು ಮಾರಾಟ ಮಾಡಬೇಕಾದರೆ ಹತ್ತು ಹಲವು ಇಲಾಖೆಗಳ ಅನುಮತಿ ಪಡೆಯಬೇಕು. ಇದು ಸುಲಭದ ಕೆಲಸವಲ್ಲ. ಇದಕ್ಕಾಗಿ ಸರ್ಕಾರ ನಿಗದಿಪಡಿಸಿದ ಶುಲ್ಕದ ಜೊತೆಗೆ ಅಧಿಕಾರಿಗಳ ಜೇಬು ಬಿಸಿ ಮಾಡಬೇಕಾದ ಪರಿಸ್ಥಿತಿ ಇದೆ.</p>.<p>ಇದಕ್ಕೆ ಇತ್ತೀಚಿನ ತಾಜಾ ನಿದರ್ಶನ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಬುಡಾ) ನಡೆದ ಘಟನೆ. ಲೇಔಟ್ಗೆ ಅನುಮತಿ ನೀಡಲು ₹10 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಅಲ್ಲಿನ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿರುವುದು. ಈ ಘಟನೆ ಹೊಸತೇನಲ್ಲ. ಬುಡಾ ವಿರುದ್ಧ ಮೇಲಿಂದ ಮೇಲೆ ಗಂಭೀರ ಸ್ವರೂಪದ ಆರೋಪಗಳು ಕೇಳಿ ಬರುತ್ತಲೇ ಇವೆ. ‘ಲೇಔಟ್ ಅನುಮತಿಗಾಗಿ ₹1 ಕೋಟಿ ಲಂಚ ಕೇಳಿದ್ದರು. ಹೀಗಾಗಿಯೇ ಬೇಸತ್ತು ಲೋಕಾಯುಕ್ತ ಪೊಲೀಸರಿಗೆ ದೂರು ಕೊಟ್ಟಿದ್ದೆ’ ಎಂದು ರಿಯಲ್ ಎಸ್ಟೇಟ್ ಉದ್ಯಮಿ ಸತೀಶ ನೌಬಾದೆ ಎಂಬುವರು ಇತ್ತೀಚೆಗೆ ಗಂಭೀರ ಸ್ವರೂಪದ ಆರೋಪ ಕೂಡ ಮಾಡಿದ್ದರು. ತನಿಖೆಗೂ ಒತ್ತಾಯಿಸಿದ್ದರು. ಈ ತರಹದ ಘಟನೆಗಳು ಹೊಸಬರು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬರುವ ಮುಂಚೆ ಯೋಚಿಸುವಂತೆ ಮಾಡಿದೆ.</p>.<p>ಟು ಲೆಟ್:</p>.<p>ಬೀದರ್ ನಗರದ ಬಹುತೇಕ ಬಡಾವಣೆಗಳಲ್ಲಿ ಅಲ್ಲಿನ ಮನೆ ಎದುರು ‘ಟು ಲೆಟ್’ ಎಂಬ ಫಲಕ ಕಾಣುತ್ತದೆ. ಬಹುತೇಕ ಮನೆಗಳಲ್ಲಿ ಬಾಡಿಗೆದಾರರು ಇಲ್ಲದೆ ಖಾಲಿ ಉಳಿದಿವೆ.</p>.<p>ಲಕ್ಷಾಂತರ ರೂಪಾಯಿ ಬ್ಯಾಂಕ್ ಸಾಲ ಮಾಡಿ ಮನೆ ಕಟ್ಟಿದವರು ಲೋನ್ ತುಂಬಲಾರದೇ ಸಂಕಷ್ಟ ಎದುರಿಸುತ್ತಿದ್ದಾರೆ. ಬ್ಯಾಂಕಿನಿಂದ ಸಾಲ ಪಡೆದು, ಎರಡ್ಮೂರು ಮಹಡಿ ಮನೆ ನಿರ್ಮಿಸಿ, ಅದರಿಂದ ಬರುವ ಬಾಡಿಗೆಯಿಂದ ಸಾಲ ಮರುಪಾವತಿ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಮನೆ ನಿರ್ಮಿಸಿದವರ ಲೆಕ್ಕ ತಲೆ ಕೆಳಗಾಗಿದೆ.</p>.<p>‘ನಾನೊಬ್ಬ ಶಿಕ್ಷಕ. ಅಲ್ಲಮಪ್ರಭು ಕಾಲೊನಿಯಲ್ಲಿ ಮೂರು ಮಹಡಿಯ ಮನೆ ಕಟ್ಟಿದ್ದೇನೆ. ₹1.20 ಕೋಟಿ ಖರ್ಚಾಗಿದೆ. ನಾನು ಕೂಡಿಟ್ಟ ಸ್ವಲ್ಪ ಹಣ ಹಾಗೂ ಮಿಕ್ಕುಳಿದದ್ದು ಬ್ಯಾಂಕಿನಿಂದ ಸಾಲ ಪಡೆದಿದ್ದೆ. ನನ್ನ ಸಂಬಳದಿಂದ ಸ್ವಲ್ಪ ಹಣ ಹಾಗೂ ಬಾಡಿಗೆಯ ಹಣ ಸೇರಿಸಿ ಲೋನ್ ಕಟ್ಟಲು ಯೋಜಿಸಿದ್ದೆ. ಆದರೆ, ಮನೆ ನಿರ್ಮಿಸಿ ಒಂದು ವರ್ಷವಾಗಿದೆ. ಒಬ್ಬ ಬಾಡಿಗೆದಾರ ಬಂದಿಲ್ಲ. ಸಾಲ ತೀರಿಸಲಾಗದೆ ಬಡ್ಡಿ ಹೆಚ್ಚಾಗುತ್ತಿದೆ. ಮಾನಸಿಕ ನೆಮ್ಮದಿಯೇ ಕಳೆದು ಹೋಗಿದೆ’ ಎಂದರು. ಹೆಸರು ಬಹಿರಂಗಪಡಿಸದಂತೆಯೂ ಮನವಿ ಮಾಡಿದರು.</p>.<p>‘ಯಾವುದೇ ನಗರದಲ್ಲಿ ಬೃಹತ್ ಕೈಗಾರಿಕೆಗಳು, ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಇದ್ದರೆ ಹೊರಗಿನಿಂದ ಜನ ಬರುತ್ತಾರೆ. ಅವರು ಉಳಿದುಕೊಳ್ಳಲು ಬಾಡಿಗೆಗೆ ಮನೆ ಬೇಕಾಗುತ್ತದೆ. ಆದರೆ, ಬೀದರ್ನಲ್ಲಿ ಆ ಪರಿಸ್ಥಿತಿಯೇ ಇಲ್ಲ. ಇಲ್ಲಿನ ಬಹುತೇಕ ಯುವಕ/ಯುವತಿಯರೇ ಉದ್ಯೋಗಕ್ಕಾಗಿ ಬೇರೆಡೆ ಹೋಗುತ್ತಾರೆ. ಸ್ವಂತ ಮನೆ ಹೊಂದಿದವರ ಮನೆಗಳಲ್ಲಿ ವಯಸ್ಸಾದವರು ಬಿಟ್ಟರೆ ಯಾರೂ ಇಲ್ಲ. ಇನ್ನು, ಬಾಡಿಗೆಗೆ ಯಾರು ಬರುತ್ತಾರೆ’ ಎಂದು ಎಂಜಿನಿಯರ್ ಹಾವಶೆಟ್ಟಿ ಪಾಟೀಲ ಪ್ರಶ್ನಿಸಿದರು.</p>.<p>‘ಯಾರೇ ಆಗಲಿ ಸ್ವಂತಕ್ಕೆ ಒಂದು ಮನೆ ಕಟ್ಟುತ್ತಾರೆ. ಸಿರಿವಂತರೂ ಮನೆಯೊಂದಿಗೆ ಎರಡ್ಮೂರು ನಿವೇಶನಗಳಿರಲಿ ಎಂದು ಖರೀದಿಸುತ್ತಾರೆ. ಜಿಲ್ಲೆಯಲ್ಲಿ ಇಂಥವರ ಸಂಖ್ಯೆ ಬಹಳ ವಿರಳ. ಅನೇಕ ಲೇಔಟ್ಗಳಾಗುತ್ತಿವೆ. ಆದರೆ, ಖರೀದಿಸುವವರು ಇಲ್ಲ. ಬ್ಯಾಂಕಿನಲ್ಲಿ ಹಣ ಕೂಡಿಟ್ಟರೆ ನಮಗೆ ಬೇಕಾದಾಗ ಬಿಡಿಸಿಕೊಳ್ಳಬಹುದು. ಆದರೆ, ನಿವೇಶನ ನಮಗೆ ಬೇಕೆಂದಾಗ ಮಾರಾಟವಾಗುವುದಿಲ್ಲ’ ಎಂದರು.</p>.<p><strong>- ‘ಹಣದ ಚಲಾವಣೆ ಇಲ್ಲ’</strong> </p><p> ಬೀದರ್ ಕೃಷಿ ಪ್ರಧಾನವಾದ ಜಿಲ್ಲೆ. ಇಲ್ಲಿ ಹೇಳಿಕೊಳ್ಳುವಂಥ ಹೆಚ್ಚಿನ ಜನರಿಗೆ ನೌಕರಿ ಕೊಡುವಂಥ ಕೈಗಾರಿಕೆಗಳಿಲ್ಲ. ಹೊಸ ಕೈಗಾರಿಕೆಗಳೂ ಬರುತ್ತಿಲ್ಲ. ಸಹಜವಾಗಿಯೇ ಹಣದ ಚಲಾವಣೆಯಿಲ್ಲ. ಹೊಸ ತಲೆಮಾರಿನವರು ಬೆಂಗಳೂರು ಹೈದರಾಬಾದ್ ಪುಣೆ ಮುಂಬೈನಂಥ ಮಹಾನಗರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ಇಲ್ಲ. ಈ ಎಲ್ಲ ಕಾರಣಗಳಿಂದಾಗಿ ರಿಯಲ್ ಎಸ್ಟೇಟ್ಗೆ ಪೆಟ್ಟು ಬಿದ್ದಿದೆ. ನಿರ್ಮಾಣ ಚಟುವಟಿಕೆಗಳು ಬಹುತೇಕ ಇನ್ನಿಲ್ಲದಂತಾಗಿವೆ ಎನ್ನುತ್ತಾರೆ ಹಿರಿಯ ಎಂಜಿನಿಯರ್ ಹಾವಶೆಟ್ಟಿ ಪಾಟೀಲ. ಕಾರ್ಮಿಕರಿಗೆ ಸಂಕಷ್ಟ ನಿರ್ಮಾಣ ಚಟುವಟಿಕೆಗಳು ಹೆಚ್ಚಾಗಿ ನಡೆಯದ ಕಾರಣ ಅದರ ನೇರ ಪರಿಣಾಮ ಕಾರ್ಮಿಕರ ಮೇಲೆ ಬಿದ್ದಿದೆ. ಕೆಲಸ ಸಿಗದೆ ಸಂಕಷ್ಟದ ನಡುವೆ ಜೀವನ ನಡೆಸುತ್ತಿದ್ದಾರೆ. ‘ಕೋವಿಡ್ ಇದ್ದಾಗ ಎರಡ್ಮೂರು ವರ್ಷ ಕಟ್ಟಡಗಳ ನಿರ್ಮಾಣ ಕಾರ್ಯ ಆಗಿರಲಿಲ್ಲ. ಅದರ ನಂತರ ಅರ್ಧಕ್ಕೆ ನಿಂತಿದ್ದ ಕಟ್ಟಡಗಳ ಕೆಲಸ ಆರಂಭಗೊಂಡಿದ್ದರಿಂದ ಕೂಲಿ ಕಾರ್ಮಿಕರಿಗೆ ಕೆಲಸ ಸಿಕ್ಕಿತು. ಆದರೆ ಈಗ ಹೆಚ್ಚಾಗಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ. ಕೆಲಸ ಸಿಗದೆ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ‘ಗ್ಯಾರಂಟಿ’ ಯೋಜನೆಗಳಿಂದ ಬಡವರಿಗೆ ಸ್ವಲ್ಪ ನೆರವಾಗಿದೆ’. ಆದರೆ ಜೀವನ ನಿರ್ವಹಣೆಗೆ ಅದು ಸಾಲಲ್ಲ’ ಎನ್ನುತ್ತಾರೆ ಮೇಸ್ತ್ರಿ ಭೀಮರಾವ್. </p>.<p><strong>- ‘ಮನೆಗೆ ಸಾಲ ಡೆಡ್ ಇನ್ವೆಸ್ಟ್ಮೆಂಟ್’</strong> </p><p>‘ಲಕ್ಷಾಂತರ ಅಥವಾ ಕೋಟ್ಯಂತರ ರೂಪಾಯಿ ಸಾಲ ಮಾಡಿ ಮನೆ ನಿರ್ಮಿಸುವುದು ‘ಡೆಡ್ ಇನ್ವೆಸ್ಟ್ಮೆಂಟ್’. ಆರ್ಥಿಕವಾಗಿ ಚತುರರಾದವರು ಮನೆ ನಿರ್ಮಾಣಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವುದಿಲ್ಲ. ಹಾಗಂತ ಮನೆ ನಿರ್ಮಿಸಬಾರದು ಅಂತಲ್ಲ. ಆರ್ಥಿಕವಾಗಿ ಸದೃಢರಾದ ನಂತರ ಅದರ ಬಗ್ಗೆ ಯೋಚಿಸಬಹುದು’ ಎನ್ನುತ್ತಾರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರದ ಸಹ ಪ್ರಾಧ್ಯಾಪಕ ಸಂಗಶೆಟ್ಟಿ ಶೆಟಕಾರ. ಆದರೆ ಬೀದರ್ ಜಿಲ್ಲೆಯಲ್ಲಿ ಈ ತಿಳಿವಳಿಕೆ ಹೆಚ್ಚಿನವರಿಗೆ ಇಲ್ಲ. ಮನೆ ಕಟ್ಟಿ ಮಕ್ಕಳ ಮದುವೆ ಮಾಡಿದರೆ ನಮ್ಮ ಕರ್ತವ್ಯ ಮುಗಿಯಿತು ಎಂಬ ಭಾವನೆ ಹೆಚ್ಚಿನವರಲ್ಲಿ ಇದೆ. ಸಾಲ ಮಾಡಿಯಾದರೂ ಮನೆ ಕಟ್ಟಿ ಸಂಕಷ್ಟಕ್ಕೆ ಒಳಗಾಗುತ್ತಾರೆ. ಆದರೆ ವ್ಯಾಪಾರಕ್ಕೆ ಹೆಸರಾದ ಗುಜರಾತಿಗಳು ರಾಜಸ್ತಾನಿಗಳನ್ನು ನಿದರ್ಶನಕ್ಕೆ ತೆಗೆದುಕೊಂಡರೆ ಅವರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮನೆ ಕಟ್ಟುವುದಿಲ್ಲ. ಬದಲಾಗಿ ಅದರಿಂದ ವ್ಯಾಪಾರ ಮಾಡುತ್ತಾರೆ. ಮತ್ತೆ ಕೆಲವರು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುತ್ತಾರೆ. ಇವೆರೆಡೂ ಬೀದರ್ನಲ್ಲಿ ಇಲ್ಲ. ಬೀದರ್ ನಗರದಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಮನೆ ಕಟ್ಟಿದವರು ಅದನ್ನು ತೀರಿಸಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಕಾರಣಕ್ಕಾಗಿಯೇ ನಿರ್ಮಾಣ ಚಟುವಟಿಕೆಗಳು ಬಹುತೇಕ ಕಡಿಮೆಯಾಗಲು ಪ್ರಮುಖ ಕಾರಣವಿರಬಹುದು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಕೋವಿಡ್ ನಂತರ ಗರಿಗೆದರಿದ್ದ ನಿರ್ಮಾಣ ಚಟುವಟಿಕೆಗಳು ಬೀದರ್ ನಗರದಲ್ಲಿ ಬಹುತೇಕ ಇನ್ನಿಲ್ಲದಂತೆ ಸ್ಥಗಿತಗೊಂಡಿವೆ.</p>.<p>ಅನೇಕ ಹೊಸ ಹೊಸ ಲೇಔಟ್ಗಳು ನಿರ್ಮಾಣವಾಗುತ್ತಿವೆ. ಆದರೆ, ಅಲ್ಲೆಲ್ಲ ಕಟ್ಟಡಗಳೇ ನಿರ್ಮಾಣವಾಗುತ್ತಿಲ್ಲ. ಅದರ ನೇರ ಪರಿಣಾಮ ರಿಯಲ್ ಎಸ್ಟೇಟ್ ಮೇಲೂ ಬಿದ್ದಿದೆ.</p>.<p>ಹಾಲಿ ಇರುವ ಹಲವು ಲೇಔಟ್ಗಳಲ್ಲಿ ನಿವೇಶನಗಳು ಬಿಕರಿ ಆಗುತ್ತಿಲ್ಲ. ಹೊಸಬರು ಹೊಸ ಲೇಔಟ್ ನಿರ್ಮಿಸಲು ಹತ್ತು ಹಲವು ಸಲ ಯೋಚಿಸುವಂತೆ ಮಾಡಿದೆ. ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ಲೇಔಟ್ ನಿರ್ಮಿಸಿದವರನ್ನು ಇದು ಚಿಂತೆಗೀಡು ಮಾಡಿದೆ.</p>.<p>ಕೃಷಿ ಜಮೀನು ಕೃಷಿಯೇತರ ಜಮೀನಾಗಿ ಪರಿವರ್ತಿಸಿ, ನಿವೇಶನಗಳನ್ನು ಮಾರಾಟ ಮಾಡಬೇಕಾದರೆ ಹತ್ತು ಹಲವು ಇಲಾಖೆಗಳ ಅನುಮತಿ ಪಡೆಯಬೇಕು. ಇದು ಸುಲಭದ ಕೆಲಸವಲ್ಲ. ಇದಕ್ಕಾಗಿ ಸರ್ಕಾರ ನಿಗದಿಪಡಿಸಿದ ಶುಲ್ಕದ ಜೊತೆಗೆ ಅಧಿಕಾರಿಗಳ ಜೇಬು ಬಿಸಿ ಮಾಡಬೇಕಾದ ಪರಿಸ್ಥಿತಿ ಇದೆ.</p>.<p>ಇದಕ್ಕೆ ಇತ್ತೀಚಿನ ತಾಜಾ ನಿದರ್ಶನ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಬುಡಾ) ನಡೆದ ಘಟನೆ. ಲೇಔಟ್ಗೆ ಅನುಮತಿ ನೀಡಲು ₹10 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಅಲ್ಲಿನ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿರುವುದು. ಈ ಘಟನೆ ಹೊಸತೇನಲ್ಲ. ಬುಡಾ ವಿರುದ್ಧ ಮೇಲಿಂದ ಮೇಲೆ ಗಂಭೀರ ಸ್ವರೂಪದ ಆರೋಪಗಳು ಕೇಳಿ ಬರುತ್ತಲೇ ಇವೆ. ‘ಲೇಔಟ್ ಅನುಮತಿಗಾಗಿ ₹1 ಕೋಟಿ ಲಂಚ ಕೇಳಿದ್ದರು. ಹೀಗಾಗಿಯೇ ಬೇಸತ್ತು ಲೋಕಾಯುಕ್ತ ಪೊಲೀಸರಿಗೆ ದೂರು ಕೊಟ್ಟಿದ್ದೆ’ ಎಂದು ರಿಯಲ್ ಎಸ್ಟೇಟ್ ಉದ್ಯಮಿ ಸತೀಶ ನೌಬಾದೆ ಎಂಬುವರು ಇತ್ತೀಚೆಗೆ ಗಂಭೀರ ಸ್ವರೂಪದ ಆರೋಪ ಕೂಡ ಮಾಡಿದ್ದರು. ತನಿಖೆಗೂ ಒತ್ತಾಯಿಸಿದ್ದರು. ಈ ತರಹದ ಘಟನೆಗಳು ಹೊಸಬರು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬರುವ ಮುಂಚೆ ಯೋಚಿಸುವಂತೆ ಮಾಡಿದೆ.</p>.<p>ಟು ಲೆಟ್:</p>.<p>ಬೀದರ್ ನಗರದ ಬಹುತೇಕ ಬಡಾವಣೆಗಳಲ್ಲಿ ಅಲ್ಲಿನ ಮನೆ ಎದುರು ‘ಟು ಲೆಟ್’ ಎಂಬ ಫಲಕ ಕಾಣುತ್ತದೆ. ಬಹುತೇಕ ಮನೆಗಳಲ್ಲಿ ಬಾಡಿಗೆದಾರರು ಇಲ್ಲದೆ ಖಾಲಿ ಉಳಿದಿವೆ.</p>.<p>ಲಕ್ಷಾಂತರ ರೂಪಾಯಿ ಬ್ಯಾಂಕ್ ಸಾಲ ಮಾಡಿ ಮನೆ ಕಟ್ಟಿದವರು ಲೋನ್ ತುಂಬಲಾರದೇ ಸಂಕಷ್ಟ ಎದುರಿಸುತ್ತಿದ್ದಾರೆ. ಬ್ಯಾಂಕಿನಿಂದ ಸಾಲ ಪಡೆದು, ಎರಡ್ಮೂರು ಮಹಡಿ ಮನೆ ನಿರ್ಮಿಸಿ, ಅದರಿಂದ ಬರುವ ಬಾಡಿಗೆಯಿಂದ ಸಾಲ ಮರುಪಾವತಿ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಮನೆ ನಿರ್ಮಿಸಿದವರ ಲೆಕ್ಕ ತಲೆ ಕೆಳಗಾಗಿದೆ.</p>.<p>‘ನಾನೊಬ್ಬ ಶಿಕ್ಷಕ. ಅಲ್ಲಮಪ್ರಭು ಕಾಲೊನಿಯಲ್ಲಿ ಮೂರು ಮಹಡಿಯ ಮನೆ ಕಟ್ಟಿದ್ದೇನೆ. ₹1.20 ಕೋಟಿ ಖರ್ಚಾಗಿದೆ. ನಾನು ಕೂಡಿಟ್ಟ ಸ್ವಲ್ಪ ಹಣ ಹಾಗೂ ಮಿಕ್ಕುಳಿದದ್ದು ಬ್ಯಾಂಕಿನಿಂದ ಸಾಲ ಪಡೆದಿದ್ದೆ. ನನ್ನ ಸಂಬಳದಿಂದ ಸ್ವಲ್ಪ ಹಣ ಹಾಗೂ ಬಾಡಿಗೆಯ ಹಣ ಸೇರಿಸಿ ಲೋನ್ ಕಟ್ಟಲು ಯೋಜಿಸಿದ್ದೆ. ಆದರೆ, ಮನೆ ನಿರ್ಮಿಸಿ ಒಂದು ವರ್ಷವಾಗಿದೆ. ಒಬ್ಬ ಬಾಡಿಗೆದಾರ ಬಂದಿಲ್ಲ. ಸಾಲ ತೀರಿಸಲಾಗದೆ ಬಡ್ಡಿ ಹೆಚ್ಚಾಗುತ್ತಿದೆ. ಮಾನಸಿಕ ನೆಮ್ಮದಿಯೇ ಕಳೆದು ಹೋಗಿದೆ’ ಎಂದರು. ಹೆಸರು ಬಹಿರಂಗಪಡಿಸದಂತೆಯೂ ಮನವಿ ಮಾಡಿದರು.</p>.<p>‘ಯಾವುದೇ ನಗರದಲ್ಲಿ ಬೃಹತ್ ಕೈಗಾರಿಕೆಗಳು, ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಇದ್ದರೆ ಹೊರಗಿನಿಂದ ಜನ ಬರುತ್ತಾರೆ. ಅವರು ಉಳಿದುಕೊಳ್ಳಲು ಬಾಡಿಗೆಗೆ ಮನೆ ಬೇಕಾಗುತ್ತದೆ. ಆದರೆ, ಬೀದರ್ನಲ್ಲಿ ಆ ಪರಿಸ್ಥಿತಿಯೇ ಇಲ್ಲ. ಇಲ್ಲಿನ ಬಹುತೇಕ ಯುವಕ/ಯುವತಿಯರೇ ಉದ್ಯೋಗಕ್ಕಾಗಿ ಬೇರೆಡೆ ಹೋಗುತ್ತಾರೆ. ಸ್ವಂತ ಮನೆ ಹೊಂದಿದವರ ಮನೆಗಳಲ್ಲಿ ವಯಸ್ಸಾದವರು ಬಿಟ್ಟರೆ ಯಾರೂ ಇಲ್ಲ. ಇನ್ನು, ಬಾಡಿಗೆಗೆ ಯಾರು ಬರುತ್ತಾರೆ’ ಎಂದು ಎಂಜಿನಿಯರ್ ಹಾವಶೆಟ್ಟಿ ಪಾಟೀಲ ಪ್ರಶ್ನಿಸಿದರು.</p>.<p>‘ಯಾರೇ ಆಗಲಿ ಸ್ವಂತಕ್ಕೆ ಒಂದು ಮನೆ ಕಟ್ಟುತ್ತಾರೆ. ಸಿರಿವಂತರೂ ಮನೆಯೊಂದಿಗೆ ಎರಡ್ಮೂರು ನಿವೇಶನಗಳಿರಲಿ ಎಂದು ಖರೀದಿಸುತ್ತಾರೆ. ಜಿಲ್ಲೆಯಲ್ಲಿ ಇಂಥವರ ಸಂಖ್ಯೆ ಬಹಳ ವಿರಳ. ಅನೇಕ ಲೇಔಟ್ಗಳಾಗುತ್ತಿವೆ. ಆದರೆ, ಖರೀದಿಸುವವರು ಇಲ್ಲ. ಬ್ಯಾಂಕಿನಲ್ಲಿ ಹಣ ಕೂಡಿಟ್ಟರೆ ನಮಗೆ ಬೇಕಾದಾಗ ಬಿಡಿಸಿಕೊಳ್ಳಬಹುದು. ಆದರೆ, ನಿವೇಶನ ನಮಗೆ ಬೇಕೆಂದಾಗ ಮಾರಾಟವಾಗುವುದಿಲ್ಲ’ ಎಂದರು.</p>.<p><strong>- ‘ಹಣದ ಚಲಾವಣೆ ಇಲ್ಲ’</strong> </p><p> ಬೀದರ್ ಕೃಷಿ ಪ್ರಧಾನವಾದ ಜಿಲ್ಲೆ. ಇಲ್ಲಿ ಹೇಳಿಕೊಳ್ಳುವಂಥ ಹೆಚ್ಚಿನ ಜನರಿಗೆ ನೌಕರಿ ಕೊಡುವಂಥ ಕೈಗಾರಿಕೆಗಳಿಲ್ಲ. ಹೊಸ ಕೈಗಾರಿಕೆಗಳೂ ಬರುತ್ತಿಲ್ಲ. ಸಹಜವಾಗಿಯೇ ಹಣದ ಚಲಾವಣೆಯಿಲ್ಲ. ಹೊಸ ತಲೆಮಾರಿನವರು ಬೆಂಗಳೂರು ಹೈದರಾಬಾದ್ ಪುಣೆ ಮುಂಬೈನಂಥ ಮಹಾನಗರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ಇಲ್ಲ. ಈ ಎಲ್ಲ ಕಾರಣಗಳಿಂದಾಗಿ ರಿಯಲ್ ಎಸ್ಟೇಟ್ಗೆ ಪೆಟ್ಟು ಬಿದ್ದಿದೆ. ನಿರ್ಮಾಣ ಚಟುವಟಿಕೆಗಳು ಬಹುತೇಕ ಇನ್ನಿಲ್ಲದಂತಾಗಿವೆ ಎನ್ನುತ್ತಾರೆ ಹಿರಿಯ ಎಂಜಿನಿಯರ್ ಹಾವಶೆಟ್ಟಿ ಪಾಟೀಲ. ಕಾರ್ಮಿಕರಿಗೆ ಸಂಕಷ್ಟ ನಿರ್ಮಾಣ ಚಟುವಟಿಕೆಗಳು ಹೆಚ್ಚಾಗಿ ನಡೆಯದ ಕಾರಣ ಅದರ ನೇರ ಪರಿಣಾಮ ಕಾರ್ಮಿಕರ ಮೇಲೆ ಬಿದ್ದಿದೆ. ಕೆಲಸ ಸಿಗದೆ ಸಂಕಷ್ಟದ ನಡುವೆ ಜೀವನ ನಡೆಸುತ್ತಿದ್ದಾರೆ. ‘ಕೋವಿಡ್ ಇದ್ದಾಗ ಎರಡ್ಮೂರು ವರ್ಷ ಕಟ್ಟಡಗಳ ನಿರ್ಮಾಣ ಕಾರ್ಯ ಆಗಿರಲಿಲ್ಲ. ಅದರ ನಂತರ ಅರ್ಧಕ್ಕೆ ನಿಂತಿದ್ದ ಕಟ್ಟಡಗಳ ಕೆಲಸ ಆರಂಭಗೊಂಡಿದ್ದರಿಂದ ಕೂಲಿ ಕಾರ್ಮಿಕರಿಗೆ ಕೆಲಸ ಸಿಕ್ಕಿತು. ಆದರೆ ಈಗ ಹೆಚ್ಚಾಗಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ. ಕೆಲಸ ಸಿಗದೆ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ‘ಗ್ಯಾರಂಟಿ’ ಯೋಜನೆಗಳಿಂದ ಬಡವರಿಗೆ ಸ್ವಲ್ಪ ನೆರವಾಗಿದೆ’. ಆದರೆ ಜೀವನ ನಿರ್ವಹಣೆಗೆ ಅದು ಸಾಲಲ್ಲ’ ಎನ್ನುತ್ತಾರೆ ಮೇಸ್ತ್ರಿ ಭೀಮರಾವ್. </p>.<p><strong>- ‘ಮನೆಗೆ ಸಾಲ ಡೆಡ್ ಇನ್ವೆಸ್ಟ್ಮೆಂಟ್’</strong> </p><p>‘ಲಕ್ಷಾಂತರ ಅಥವಾ ಕೋಟ್ಯಂತರ ರೂಪಾಯಿ ಸಾಲ ಮಾಡಿ ಮನೆ ನಿರ್ಮಿಸುವುದು ‘ಡೆಡ್ ಇನ್ವೆಸ್ಟ್ಮೆಂಟ್’. ಆರ್ಥಿಕವಾಗಿ ಚತುರರಾದವರು ಮನೆ ನಿರ್ಮಾಣಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವುದಿಲ್ಲ. ಹಾಗಂತ ಮನೆ ನಿರ್ಮಿಸಬಾರದು ಅಂತಲ್ಲ. ಆರ್ಥಿಕವಾಗಿ ಸದೃಢರಾದ ನಂತರ ಅದರ ಬಗ್ಗೆ ಯೋಚಿಸಬಹುದು’ ಎನ್ನುತ್ತಾರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರದ ಸಹ ಪ್ರಾಧ್ಯಾಪಕ ಸಂಗಶೆಟ್ಟಿ ಶೆಟಕಾರ. ಆದರೆ ಬೀದರ್ ಜಿಲ್ಲೆಯಲ್ಲಿ ಈ ತಿಳಿವಳಿಕೆ ಹೆಚ್ಚಿನವರಿಗೆ ಇಲ್ಲ. ಮನೆ ಕಟ್ಟಿ ಮಕ್ಕಳ ಮದುವೆ ಮಾಡಿದರೆ ನಮ್ಮ ಕರ್ತವ್ಯ ಮುಗಿಯಿತು ಎಂಬ ಭಾವನೆ ಹೆಚ್ಚಿನವರಲ್ಲಿ ಇದೆ. ಸಾಲ ಮಾಡಿಯಾದರೂ ಮನೆ ಕಟ್ಟಿ ಸಂಕಷ್ಟಕ್ಕೆ ಒಳಗಾಗುತ್ತಾರೆ. ಆದರೆ ವ್ಯಾಪಾರಕ್ಕೆ ಹೆಸರಾದ ಗುಜರಾತಿಗಳು ರಾಜಸ್ತಾನಿಗಳನ್ನು ನಿದರ್ಶನಕ್ಕೆ ತೆಗೆದುಕೊಂಡರೆ ಅವರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮನೆ ಕಟ್ಟುವುದಿಲ್ಲ. ಬದಲಾಗಿ ಅದರಿಂದ ವ್ಯಾಪಾರ ಮಾಡುತ್ತಾರೆ. ಮತ್ತೆ ಕೆಲವರು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುತ್ತಾರೆ. ಇವೆರೆಡೂ ಬೀದರ್ನಲ್ಲಿ ಇಲ್ಲ. ಬೀದರ್ ನಗರದಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಮನೆ ಕಟ್ಟಿದವರು ಅದನ್ನು ತೀರಿಸಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಕಾರಣಕ್ಕಾಗಿಯೇ ನಿರ್ಮಾಣ ಚಟುವಟಿಕೆಗಳು ಬಹುತೇಕ ಕಡಿಮೆಯಾಗಲು ಪ್ರಮುಖ ಕಾರಣವಿರಬಹುದು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>