ಬೀದರ್: ದಿನೇಶ್ ಆರ್. ವಾಂಖೇಡೆ ಕಲಾ ತಂಡ ರಚಿಸಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಿದ್ರಿ ಕಲಾವಿದ ಶಾಹ ರಶೀದ್ ಅಹಮ್ಮದ್ ಖಾದ್ರಿ ಅವರ ಜೀವನ ಚರಿತ್ರೆ ಹಾಗೂ ಬಿದ್ರಿ ಕಲೆ ಕುರಿತ ಸಂಶೋಧನಾ ಕೃತಿಯನ್ನು ನಗರದಲ್ಲಿ ಬಿಡುಗಡೆ ಮಾಡಲಾಯಿತು. ಶಾ ರಶೀದ್ ಅಹಮ್ಮದ್ ಖಾದ್ರಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಖಾದ್ರಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಕಲ್ಯಾಣ ಕರ್ನಾಟಕದ ಮೊದಲ ವ್ಯಕ್ತಿಯಾಗಿದ್ದಾರೆ ಎಂದು ದಿನೇಶ್ ಆರ್. ವಾಂಖೇಡೆ ಹೇಳಿದರು.
ಸುನೀಲಕುಮಾರ ಮಹಾಗಾಂವ್, ಸಂಜುಕುಮಾರ ಭಂಡೆ, ಅಜಯ ರಾಂಪುರೆ, ಚಂದ್ರಶೇಖರ ಅರಕೇರಿ ಇದ್ದರು.