ನಾಗರ ಪಂಚಮಿ, ಶ್ರೀ ಮಹಾಲಕ್ಸ್ಮಿ ವ್ರತ ಹೀಗೆ ಅನಂತ ಪೂಜೆಗಳು ಶ್ರಾವಣ ಮಾಸದಲ್ಲಿ ಬರುತ್ತವೆ ಇವೆಲ್ಲವೂ ಅಂಧಶ್ರದ್ಧೆಯಲ್ಲ, ಪ್ರಕೃತಿಯನ್ನು ಪೂಜಿಸುವ ಗೌರವಿಸುವ ಪ್ರಕ್ರಿಯೆ. ಪ್ರಕೃತಿಯನ್ನು ಪ್ರೀತಿಸದಿದ್ದರೆ ಅದು ನಮ್ಮನ್ನು ಸಂರಕ್ಷಣೆ ಮಾಡುವುದಿಲ್ಲ ಹೀಗಾಗಿ ಈ ಮಾಸದಲ್ಲಿ ಮಣ್ಣು ,ಭೂಮಿ,ನದಿ,ಕೆರೆ,ಬಾವಿ,ವೃಕ್ಷ ವನಸ್ಪತಿ, ಇವೆಲ್ಲವುಗಳನ್ನು ಪೂಜಿಸುವದರೊಂದಿಗೆ ಶಂಕರನ್ನ ಕಂಡಂತ ದೇಶ ಇದು ಇಂದು ಭೂಮಿಗೆ,ಭೌಗೋಳಿಕ ಭೂ ಖಂಡದಲ್ಲಿ ಆಚರಿಸಿ ಅನುಭವಿಸುವ ಭಾವ ಸಂಗಮದ ಕ್ಷೇತ್ರವೆ ಭಾರತ ಈಗಾಗಿ ಭಾರತದಲ್ಲಿ ಶ್ರಾವಣ ಮಾಸಕ್ಕೆ ಇಷ್ಟೊಂದು ಮಹತ್ವವಿದೆ ಆ ಶ್ರವಣ ಶಕ್ತಿಯೇ ಮನುಷ್ಯನ ಜ್ಞಾನ ಶಕ್ತಿ ವಿಕಾಸಕ್ಕೆ ಕಾರಣವಾಗಿದೆ ಹೀಗಾಗಿ ಧರ್ಮ ಆಚರಣೆ, ಧಾರ್ಮಿಕ ಶ್ರವಣ ಅದನ್ನು ಮನನ ಮಾಡಿ ಆಚರಣೆ ಆದಿಗಳನ್ನು ಮಾಡುವುದೇ ಈ ಮನುಷ್ಯನ ಪರಿಪೂರ್ಣತೆಯ ಜೀವನದ ಗುಟ್ಟಾಗಿದೆ.