ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ನಾನು ಉಜಳಂಬ-ಮಳಗಿ ಹಾಗೂ ಇತರ ರಸ್ತೆಗಳಿಗೆ ಹೋಗಿ ನೋಡಿದ್ದೇನೆ. ಡಾಂಬರಿನ ಪದರು ಬಾಳೆ ಹಣ್ಣಿಯ ಸಿಪ್ಪೆ ಸುಲಿದಂತೆ ಕೈಯಿಂದ ಹಿಡಿದು ಮೇಲಕ್ಕೆ ಎತ್ತಬಹುದಾಗಿದೆ. ಸಸ್ತಾಪುರ-ಇಲ್ಲಾಳ ರಸ್ತೆ, ಹುಲಸೂರ- ಕೋಟಮಾಳ ರಸ್ತೆಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಅನ್ಯ ಜಿಲ್ಲೆಯವರಿಗೆ ಟೆಂಡರ್ ನೀಡಿದ್ದು ಹಾಗೂ ಅಧಿಕಾರಿಗಳು ಮತ್ತು ಶಾಸಕರು ಶೇ 50 ರಷ್ಟು ಪರ್ಸೆಂಟೇಜ್ ಪಡೆಯುತ್ತಿರುವ ಕಾರಣ ಹೀಗಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.