ಬೀದರ್: ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘದ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ವಿನೋದ ಅಪ್ಪೆ ಹಾಗೂ ಜಿಲ್ಲಾ ಘಟಕದ ಖಜಾಂಚಿಯಾಗಿ ಪೃಥ್ವಿರಾಜ ನಿಟ್ಟೂರಕರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಹಾಸನಕರ್ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ನಡೆದ ಆಯ್ಕೆ ಸಭೆಯಲ್ಲಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಪಂಢರಿನಾಥ ಮಲ್ಕಾಪುರೆ, ಪ್ರಧಾನ ಕಾರ್ಯದರ್ಶಿ ಬುದ್ಧಪ್ರಕಾಶ ಭಾವಿಕಟ್ಟಿ, ಶರಣಪ್ಪ ವಾಡೇಕರ್, ರಾಜಕುಮಾರ ವಾಘಮಾರೆ, ಕಿರಣ ಕನೇರಿ, ಭರತ ವಾಡೇಕರ್, ಅಂಬಾದಾಸ, ಪಂಕಜ, ಅನಿಲಕುಮಾರ, ಸಂಜು ದೊಡ್ಡಮನಿ, ಅಶೋಕ ಮಾಳಗೆ ಇದ್ದರು.