ದೇಶದ ಪ್ರಗತಿಗೆ ಶಿಕ್ಷಣವೇ ಮೂಲ. ವಿದ್ಯಾರ್ಥಿಗಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡಿದರೆ ವೈಯಕ್ತಿಕ ಪ್ರಗತಿಯೊಂದಿಗೆ, ರಾಜ್ಯ, ಮತ್ತು ರಾಷ್ಟ್ರದ ಪ್ರಗತಿಯಾಗುವುದು. ಹಾಗಾಗಿ ಪಾಲಕರು ಮತ್ತು ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡಲು ಶ್ರಮ ಪಡಬೇಕು ಎಂದು ಸಲಹೆ ನೀಡಿದರು. ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿದರು. ಶಾಲೆಯ ಮುಖ್ಯಶಿಕ್ಷಕ ಆನಂದಕುಮಾರ ಜೋಳದಪಕೆ, ಪ್ರಾಚಾರ್ಯ ವಿಷ್ಣು ಕೋಟೆ, ರೇಖಾ ಮಹಾಜನ, ಸುಮಾ ಜಲ್ದೆ ಮಾತನಾಡಿದರು. ಬಾಲರಾಜ ಶಿವಣಗೆ, ಐಟಿಐ ಪ್ರಾಂಶುಪಾಲ ಸತೀಶ ಬಿರಾದಾರ, ರಾಜು ಮೇತ್ರೆ, ಲೋಕೇಶ ಮಡಿವಾಳ, ಪೂನಮ್ ಇದ್ದರು. ಎ.ಜೊಳದಪಕೆ ಸ್ವಾಗತಿಸಿದರು. ಅಮೃತ ಮೇತ್ರೆ ನಿರೂಪಿಸಿದರು. ಬಾಲರಾಜ ವಂದಿಸಿದರು.