<p><strong>ಹುಲಸೂರ</strong>: ‘ವಿದ್ಯಾರ್ಥಿಗಳು ದೇಶದ ಸಂಪತ್ತು, ಸರ್ವತೋಮುಖ ಅಭಿವೃದ್ಧಿಯೇ ಶಿಕ್ಷಕರ ಮೂಲ ಧೈಯ’ ಎಂದು ಶಾಸಕ ಶರಣು ಸಲಗರ ಹೇಳಿದರು.</p>.<p>ತಾಲ್ಲೂಕಿನ ಗೋರಟಾ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವ ನಿಮಿತ್ತ ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿ, ಸಿಹಿ ಹಂಚಿ ಬರಮಾಡಿಕೊಂಡು ಅವರು ಮಾತನಾಡಿದರು.</p>.<p>‘ಪ್ರತಿನಿತ್ಯ ಮಕ್ಕಳು ಶಿಕ್ಷಕರ ಹತ್ತಿರ ಸುಮಾರು 8 ಗಂಟೆಗಳವರೆಗೆ ಇರುತ್ತಾರೆ. ಶಿಕ್ಷಕರು ತಮ್ಮ ಸ್ವಂತ ಮಕ್ಕಳಿಗಿಂತಲೂ ಶಾಲಾ ಮಕ್ಕಳಿಗೆ ಹೆಚ್ಚಿನ ಸಮಯ ನೀಡಬೇಕು. ಶಾಲಾ ಮಕ್ಕಳು ತಮ್ಮ ಸ್ವಂತ ಮಕ್ಕಳು ಎಂಬ ಭಾವ ಎಲ್ಲ ಶಿಕ್ಷಕರಲ್ಲಿರಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವರನ್ನು ದೇಶದ ಸರ್ವಶ್ರೇಷ್ಠ ನಾಗರಿಕರನ್ನಾಗಿ ಮಾಡುವುದು ಶಿಕ್ಷಕರ ಹೊಣೆಯಾಗಿದೆ. ತಾಲ್ಲೂಕಿನ ಶಿಕ್ಷಣ ಸಮಿತಿ ಅಧ್ಯಕ್ಷನಾಗಿ, ಶಿಕ್ಷಣ ಸುಧಾರಣೆಗೆ ಹಗಲಿರುಳು ಶ್ರಮಿಸುವೆ’ ಎಂದು ಹೇಳಿದರು.</p>.<p>ಶಿಕ್ಷಣ ಇಲಾಖೆ ವತಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ, ದ್ವಿತೀಯ ಹಾಗೂ ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ಶಾಸಕರು ಉಚಿತ ಲ್ಯಾಪ್ಟಾಪ್ ವಿತರಿಸಿದರು.</p>.<p>ತಹಶೀಲ್ದಾರ್ ಶಿವಾನಂದ ಮೇತ್ರೆ, ತಾ.ಪಂ ಇಒ ವೈಜಣ್ಣ ಫುಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದನೂರ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸಂಜಯಕುಮಾರ ಕಾಂಗೆ, ಗ್ರಾ.ಪಂ ಅಧ್ಯಕ್ಷೆ ಸೀತಾ ಸಂಜುಕುಮಾರ, ಮಹಾದೇವಿ ಹತ್ತೆ, ಸೂರ್ಯಕಾಂತ ಪಾಟಿಲ, ಸೂರ್ಯಕಾಂತ ಅಡಕೆ, ರಾಜಪ್ಪ ನಂದೋಡೆ ಗ್ರಾಮದ ಪ್ರಮುಖರಾದ ಜಗನ್ನಾಥ ಪತಂಗೆ, ರವಿ ಕಾದೇಪುರೆ, ಚನ್ನಬಸವ ಯರನಳ್ಳೆ, ಸಂಜು ತೆಲಂಗ, ಮಹೇಶ ಬಿರಾದಾರ ಮಹೇಶ ಪಟ್ನೆ, ವಿಲಾಸ ಗುತ್ತೆ ಸೇರಿ ಶಾಲಾ ಮಕ್ಕಳೂ ಉಪಸ್ಥಿತರಿದ್ದರು.</p>.<p>ವಿವಿಧೆಡೆ ಶಾಲಾ ಪ್ರಾರಂಭೋತ್ಸವ</p>.<p>ಹುಲಸೂರ: ಬೇಸಿಗೆ ರಜೆ ಕಳೆದು ಶಾಲೆಯತ್ತ ಮುಖ ಮಾಡಿದ ಚಿಣ್ಣರನ್ನು ತಾಲೂಕಿನಾದ್ಯಂತ ಶಾಲೆಗಳಲ್ಲಿ ಶುಕ್ರವಾರ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶೈಕ್ಷಣಿಕ ವರ್ಷಕ್ಕೆ ಸ್ವಾಗತ ಕೋರಿದರು.</p>.<p>ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಾದ ಮಿರಖಲ, ಶ್ರಿಮಾಳಿ, ಗುಂಜರ್ಗಾ, ಮಾನಿಕೇಶ್ವರ, ಹರೆವಾಡಿ, ಕೊಂಗಳಿ, ಅಂಬೇವಾಡಿ, ಮೇಹಕರ, ಹನುಮಂತ ವಾಡಿ, ಕೆಸರ ಜವಳಗಾ, ಕದಿರಾಬಾದ, ತೋಗಲೂರ, ಗೋರಟಾ, ಸಾಯಗಾಂವ ಸೇರಿ ಶಾಲೆಯಲ್ಲಿ ಹಸಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರ ತಂಡ ಮಕ್ಕಳನ್ನು ಶಾಲೆಗೆ ಸ್ವಾಗತಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಸೂರ</strong>: ‘ವಿದ್ಯಾರ್ಥಿಗಳು ದೇಶದ ಸಂಪತ್ತು, ಸರ್ವತೋಮುಖ ಅಭಿವೃದ್ಧಿಯೇ ಶಿಕ್ಷಕರ ಮೂಲ ಧೈಯ’ ಎಂದು ಶಾಸಕ ಶರಣು ಸಲಗರ ಹೇಳಿದರು.</p>.<p>ತಾಲ್ಲೂಕಿನ ಗೋರಟಾ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವ ನಿಮಿತ್ತ ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿ, ಸಿಹಿ ಹಂಚಿ ಬರಮಾಡಿಕೊಂಡು ಅವರು ಮಾತನಾಡಿದರು.</p>.<p>‘ಪ್ರತಿನಿತ್ಯ ಮಕ್ಕಳು ಶಿಕ್ಷಕರ ಹತ್ತಿರ ಸುಮಾರು 8 ಗಂಟೆಗಳವರೆಗೆ ಇರುತ್ತಾರೆ. ಶಿಕ್ಷಕರು ತಮ್ಮ ಸ್ವಂತ ಮಕ್ಕಳಿಗಿಂತಲೂ ಶಾಲಾ ಮಕ್ಕಳಿಗೆ ಹೆಚ್ಚಿನ ಸಮಯ ನೀಡಬೇಕು. ಶಾಲಾ ಮಕ್ಕಳು ತಮ್ಮ ಸ್ವಂತ ಮಕ್ಕಳು ಎಂಬ ಭಾವ ಎಲ್ಲ ಶಿಕ್ಷಕರಲ್ಲಿರಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವರನ್ನು ದೇಶದ ಸರ್ವಶ್ರೇಷ್ಠ ನಾಗರಿಕರನ್ನಾಗಿ ಮಾಡುವುದು ಶಿಕ್ಷಕರ ಹೊಣೆಯಾಗಿದೆ. ತಾಲ್ಲೂಕಿನ ಶಿಕ್ಷಣ ಸಮಿತಿ ಅಧ್ಯಕ್ಷನಾಗಿ, ಶಿಕ್ಷಣ ಸುಧಾರಣೆಗೆ ಹಗಲಿರುಳು ಶ್ರಮಿಸುವೆ’ ಎಂದು ಹೇಳಿದರು.</p>.<p>ಶಿಕ್ಷಣ ಇಲಾಖೆ ವತಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ, ದ್ವಿತೀಯ ಹಾಗೂ ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ಶಾಸಕರು ಉಚಿತ ಲ್ಯಾಪ್ಟಾಪ್ ವಿತರಿಸಿದರು.</p>.<p>ತಹಶೀಲ್ದಾರ್ ಶಿವಾನಂದ ಮೇತ್ರೆ, ತಾ.ಪಂ ಇಒ ವೈಜಣ್ಣ ಫುಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದನೂರ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸಂಜಯಕುಮಾರ ಕಾಂಗೆ, ಗ್ರಾ.ಪಂ ಅಧ್ಯಕ್ಷೆ ಸೀತಾ ಸಂಜುಕುಮಾರ, ಮಹಾದೇವಿ ಹತ್ತೆ, ಸೂರ್ಯಕಾಂತ ಪಾಟಿಲ, ಸೂರ್ಯಕಾಂತ ಅಡಕೆ, ರಾಜಪ್ಪ ನಂದೋಡೆ ಗ್ರಾಮದ ಪ್ರಮುಖರಾದ ಜಗನ್ನಾಥ ಪತಂಗೆ, ರವಿ ಕಾದೇಪುರೆ, ಚನ್ನಬಸವ ಯರನಳ್ಳೆ, ಸಂಜು ತೆಲಂಗ, ಮಹೇಶ ಬಿರಾದಾರ ಮಹೇಶ ಪಟ್ನೆ, ವಿಲಾಸ ಗುತ್ತೆ ಸೇರಿ ಶಾಲಾ ಮಕ್ಕಳೂ ಉಪಸ್ಥಿತರಿದ್ದರು.</p>.<p>ವಿವಿಧೆಡೆ ಶಾಲಾ ಪ್ರಾರಂಭೋತ್ಸವ</p>.<p>ಹುಲಸೂರ: ಬೇಸಿಗೆ ರಜೆ ಕಳೆದು ಶಾಲೆಯತ್ತ ಮುಖ ಮಾಡಿದ ಚಿಣ್ಣರನ್ನು ತಾಲೂಕಿನಾದ್ಯಂತ ಶಾಲೆಗಳಲ್ಲಿ ಶುಕ್ರವಾರ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶೈಕ್ಷಣಿಕ ವರ್ಷಕ್ಕೆ ಸ್ವಾಗತ ಕೋರಿದರು.</p>.<p>ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಾದ ಮಿರಖಲ, ಶ್ರಿಮಾಳಿ, ಗುಂಜರ್ಗಾ, ಮಾನಿಕೇಶ್ವರ, ಹರೆವಾಡಿ, ಕೊಂಗಳಿ, ಅಂಬೇವಾಡಿ, ಮೇಹಕರ, ಹನುಮಂತ ವಾಡಿ, ಕೆಸರ ಜವಳಗಾ, ಕದಿರಾಬಾದ, ತೋಗಲೂರ, ಗೋರಟಾ, ಸಾಯಗಾಂವ ಸೇರಿ ಶಾಲೆಯಲ್ಲಿ ಹಸಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರ ತಂಡ ಮಕ್ಕಳನ್ನು ಶಾಲೆಗೆ ಸ್ವಾಗತಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>