ಇಬ್ಬರೂ ಮುಂಬೈನ ಪನ್ವೇಲ್ ನಿಲ್ದಾಣದಲ್ಲಿ ರೈಲನ್ನೇರಿದ್ದರು. ಅವರನ್ನು ತನ್ನ ಜತೆಗೆ ಕರೆದುಕೊಂಡು ಹೋಗಲು ಮಹಿಳೆಯೊಬ್ಬರು ಪ್ರಯತ್ನಿಸುತ್ತಿದ್ದರು ಎಂದು ಸಹಪ್ರಯಾಣಿಕರು ರೈಲ್ವೇ ರಕ್ಷಣಾ ಪಡೆಯ ಸಿಬ್ಬಂದಿಗೆ ತಿಳಿಸಿದರು. ಅವರ ಬಳಿ ಟಿಕೆಟ್ ಇರಲಿಲ್ಲ ಹಾಗೂ ಪೋಷಕರೂ ಜತೆಗಿರಲಿಲ್ಲ. ಈ ಬಗ್ಗೆ ವಿಚಾರಣೆ ನಡೆಸಿದಾಗ ಸೂಕ್ತವಾಗಿ ಮಾಹಿತಿಯನ್ನೂ ನೀಡಲಿಲ್ಲ. ಕೊನೆಗೆ ಅವರನ್ನು ಆರ್ಪಿಎಫ್ ಕಚೇರಿಗೆ ಕರೆತಂದು, ಮಹಿಳಾ ಕಾನ್ಸ್ಟೆಬಲ್ ಸಮ್ಮಖದಲ್ಲಿ ವಿಚಾರಣೆ ಮಾಡಲಾಯಿತು. ಆಗ, ತಮ್ಮ ಮಲತಾಯಿಯ ಕಿರುಕುಳ ತಡೆಯಲಾಗದೇ ಮುಂಬೈಯಲ್ಲಿರುವ ಮನೆಬಿಟ್ಟು ಬಂದಿರುವುದಾಗಿ ತಿಳಿಸಿದರು.