<p><strong>ಭಾಲ್ಕಿ</strong>: ತಾಲ್ಲೂಕಿನ ಎಲ್ಲೆಡೆ ಶುಕ್ರವಾರ ಶಾಲೆ ಪ್ರಾರಂಭೋತ್ಸವ ನಿಮಿತ್ತ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂ, ಪುಸ್ತಕ ನೀಡಿ ಬರಮಾಡಿಕೊಂಡರು.</p>.<p>ತಾಲ್ಲೂಕಿನ ದಾಡಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯದ್ವಾರದ ಬಳಿ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಹೂಗಳನ್ನು ಹಾಕುವುದರ ಮೂಲಕ ಮತ್ತು ಕೈಯಲ್ಲಿ ಗುಲಾಬಿ ಹೂ ನೀಡುವುದರ ಮೂಲಕ ಮುಗುಳ್ನಗೆಯಿಂದ ವಿದ್ಯಾರ್ಥಿಗಳನ್ನು ಶಾಲಾ ಆವರಣಕ್ಕೆ ಬರಮಾಡಿಕೊಂಡರು.</p>.<p>ನಂತರ ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿದರು. ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.</p>.<p>ಎಸ್ ಡಿಎಂಸಿ ಅಧ್ಯಕ್ಷರಾದ ಗಣಪತಿ ಧಡ್ಡೆ, ದಿಲೀಪ ತಮಾಸಂಗೆ, ಮುಖ್ಯಶಿಕ್ಷಕರಾದ ಸಂತೋಷ ವಾಡೆ, ಎಂ.ಡಿ.ಹನೀಫ್, ಶಿಕ್ಷಕರಾದ ಸತೀಶ ಸಿದ್ದೇಶ್ವರ, ದೇವಿದಾಸ ಚೌಹಾಣ್, ರೇಖಾ, ಜಯಂತಿ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.</p>.<p>‘ಶೈಕ್ಷಣಿಕ ಯಾತ್ರೆ ಉತ್ಸವವಾಗಲಿ’</p>.<p>ಶಾಲಾ ಪ್ರಾರಂಭೋತ್ಸವದ ರೀತಿಯಲ್ಲಿಯೇ ಒಂದು ವರ್ಷದ ಶೈಕ್ಷಣಿಕ ಯಾತ್ರೆ ತುಂಬಾ ಉತ್ಸಾಹ ಮತ್ತು ಸಡಗರದಿಂದ ಮುಂದೆ ಸಾಗಬೇಕು ಎಂದು ಡಯಟ್ ಪ್ರಾಚಾರ್ಯ ಪ್ರಸನ್ನಕುಮಾರ ಹೇಳಿದರು.</p>.<p>ತಾಲ್ಲೂಕಿನ ಮದಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ತಾ.ಪಂ ಇಒ ಸೂರ್ಯಕಾಂತ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ, ಮಹಾದೇವ ಸಜ್ಜನ, ಶಿವಶಂಕರ ಸ್ವಾಮಿ, ಮುಖ್ಯಶಿಕ್ಷಕ ಅಶೋಕ ಬರ್ಮಾ, ಇಸಿಒ ಮಲ್ಲಿಕಾರ್ಜುನ ಕನ್ನಾಳೆ, ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ, ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ಖಂಡಾಳೆ, ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಹಣಮಂತ ಕಾರಾಮುಂಗೆ ಸೇರಿದಂತೆ ಅನೇಕರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಲ್ಕಿ</strong>: ತಾಲ್ಲೂಕಿನ ಎಲ್ಲೆಡೆ ಶುಕ್ರವಾರ ಶಾಲೆ ಪ್ರಾರಂಭೋತ್ಸವ ನಿಮಿತ್ತ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂ, ಪುಸ್ತಕ ನೀಡಿ ಬರಮಾಡಿಕೊಂಡರು.</p>.<p>ತಾಲ್ಲೂಕಿನ ದಾಡಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯದ್ವಾರದ ಬಳಿ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಹೂಗಳನ್ನು ಹಾಕುವುದರ ಮೂಲಕ ಮತ್ತು ಕೈಯಲ್ಲಿ ಗುಲಾಬಿ ಹೂ ನೀಡುವುದರ ಮೂಲಕ ಮುಗುಳ್ನಗೆಯಿಂದ ವಿದ್ಯಾರ್ಥಿಗಳನ್ನು ಶಾಲಾ ಆವರಣಕ್ಕೆ ಬರಮಾಡಿಕೊಂಡರು.</p>.<p>ನಂತರ ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿದರು. ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.</p>.<p>ಎಸ್ ಡಿಎಂಸಿ ಅಧ್ಯಕ್ಷರಾದ ಗಣಪತಿ ಧಡ್ಡೆ, ದಿಲೀಪ ತಮಾಸಂಗೆ, ಮುಖ್ಯಶಿಕ್ಷಕರಾದ ಸಂತೋಷ ವಾಡೆ, ಎಂ.ಡಿ.ಹನೀಫ್, ಶಿಕ್ಷಕರಾದ ಸತೀಶ ಸಿದ್ದೇಶ್ವರ, ದೇವಿದಾಸ ಚೌಹಾಣ್, ರೇಖಾ, ಜಯಂತಿ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.</p>.<p>‘ಶೈಕ್ಷಣಿಕ ಯಾತ್ರೆ ಉತ್ಸವವಾಗಲಿ’</p>.<p>ಶಾಲಾ ಪ್ರಾರಂಭೋತ್ಸವದ ರೀತಿಯಲ್ಲಿಯೇ ಒಂದು ವರ್ಷದ ಶೈಕ್ಷಣಿಕ ಯಾತ್ರೆ ತುಂಬಾ ಉತ್ಸಾಹ ಮತ್ತು ಸಡಗರದಿಂದ ಮುಂದೆ ಸಾಗಬೇಕು ಎಂದು ಡಯಟ್ ಪ್ರಾಚಾರ್ಯ ಪ್ರಸನ್ನಕುಮಾರ ಹೇಳಿದರು.</p>.<p>ತಾಲ್ಲೂಕಿನ ಮದಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ತಾ.ಪಂ ಇಒ ಸೂರ್ಯಕಾಂತ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ, ಮಹಾದೇವ ಸಜ್ಜನ, ಶಿವಶಂಕರ ಸ್ವಾಮಿ, ಮುಖ್ಯಶಿಕ್ಷಕ ಅಶೋಕ ಬರ್ಮಾ, ಇಸಿಒ ಮಲ್ಲಿಕಾರ್ಜುನ ಕನ್ನಾಳೆ, ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ, ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ಖಂಡಾಳೆ, ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಹಣಮಂತ ಕಾರಾಮುಂಗೆ ಸೇರಿದಂತೆ ಅನೇಕರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>