ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ ಸ್ವಾಮೀಜಿ ಜಯಂತಿ ಮಹೋತ್ಸವ 26 ರಿಂದ

Last Updated 24 ನವೆಂಬರ್ 2021, 13:09 IST
ಅಕ್ಷರ ಗಾತ್ರ

ಬೀದರ್: ಶಿವಕುಮಾರ ಸ್ವಾಮೀಜಿ ಅವರ 77ನೇ ಜಯಂತಿ ಮಹೋತ್ಸವವು ಇಲ್ಲಿಯ ಸಿದ್ಧಾರೂಢ ಮಠದ ಚಿದಂಬರಾಶ್ರಮದಲ್ಲಿ ನ. 26 ರಿಂದ 30 ರ ವರೆಗೆ ನಡೆಯಲಿದೆ.

ಪ್ರತಿ ದಿನ ಬೆಳಿಗ್ಗೆ 6.30 ರಿಂದ 7 ರ ವರೆಗೆ ಮಠದ ಸಾಧಕ, ಸಾಧಕಿಯರಿಂದ ಜಪ, ಧ್ಯಾನ, ಬೆಳಿಗ್ಗೆ 8 ರಿಂದ 10, ಸಂಜೆ 6 ರಿಂದ 8 ರ ವರೆಗೆ ಪ್ರವಚನ, ಸಿದ್ಧಾರೂಢರ ಚರಿತ್ರೆ ಪಾರಾಯಣ, ಭಜನೆ ಕಾರ್ಯಕ್ರಮಗಳು ಜರುಗಲಿವೆ. ಸಿದ್ಧಾರೂಢ ಡಿ.ಎಡ್ ಕಾಲೇಜಿನ ಗುಂಡಪ್ಪ ಪಾಂಚಾಳ ಹಾಗೂ ಬಗದಲ್‍ನ ಬಸವಣಪ್ಪ ಮಾಸ್ಟರ್ ಸಂಗೀತ ನಡೆಸಿಕೊಡಲಿದ್ದಾರೆ.

29 ರಂದು ಶ್ರೀಗಳ ರಜತ ಸಿಂಹಾಸನಾರೋಹಣ, 30 ರಂದು ಸುವರ್ಣ ಕಿರೀಟ ಧಾರಣೆ ನಡೆಯಲಿದೆ. ಶೋಭಾ ಕಾಳಗಿ, ತಾರಾಬಾಯಿ ಮನಗೂಳಿ, ಸಂಜು ಐಹೊಳೆ, ಶಿವಶರಣ ಸುರಪುರ, ಸಂಗನಗೌಡ ಪಾಟೀಲ ಅವರು ತುಲಾಭಾರ ಸೇವೆ ನೆರವೇರಿಸಲಿದ್ದಾರೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಯಂತಿ ಮಹೋತ್ಸವ ಸಮಿತಿ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT