<p>ಬಸವಕಲ್ಯಾಣ: ತಾಲ್ಲೂಕಿನ ಬಟಗೇರಾದ ಗೋಣಿ ಬಸವೇಶ್ವರ ಮಠ ಹಳೆಯ ಮತ್ತು ಮಹತ್ವದ ಮಠ-ದೇವಸ್ಥಾನಗಳಲ್ಲಿ ಒಂದಾಗಿದೆ. ಅಪಾರ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಶನಿವಾರದಿಂದ ಮೂರು ದಿನ ಜಾತ್ರೆ ನಡೆಯಲಿದೆ. ಫೆ.19 ಕ್ಕೆ ರಥೋತ್ಸವ ಜರುಗುವುದು.</p>.<p>ಗೋಣಿ ಬಸವೇಶ್ವರರು ಎಲ್ಲಿಯವರು ಮತ್ತು ಯಾವಾಗಿನವರು ಎಂಬುದರ ಬಗ್ಗೆ ಪುರಾವೆಗಳಿಲ್ಲ. ಆದರೆ ಸಮೀಪದ ಪಹಾಡನ ಜಿಂದಾಶಾ ಮದಾರ ಸಾಹೇಬ್ ಅವರ ಒಡನಾಡಿ ಆಗಿದ್ದರು ಎಂಬುದರ ಕುರಿತು ಭಜನೆ ಹಾಡುಗಳು ಮತ್ತು ಜನಪದ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಇವರ ಕಾಲಾವಧಿ 15ನೇ ಶತಮಾನವಾಗಿದೆ. ಏಕೆಂದರೆ ಜಿಂದಾಶಾ ಮದಾರ ಸಾಹೇಬ್ ಒಳಗೊಂಡು ಅನೇಕ ಸೂಫಿ ಸಂತರು ಈ ಭಾಗಕ್ಕೆ ಇದೇ ಕಾಲಾವಧಿಯಲ್ಲಿ ಬಂದಿದ್ದರು. ಡಾ.ಗುರುಲಿಂಗಪ್ಪ ಧಬಾಲೆ ಮತ್ತು ಲಕ್ಷ್ಮಿಕಾಂತ ಪಂಚಾಳ ಸಂಪಾದಿಸಿದ ‘ಸೌಹಾರ್ದ ಪಥ’ ಈ 700 ಪುಟದ ಸಾಂದರ್ಭಿಕ ಗ್ರಂಥದಲ್ಲಿನ ಬಟಗೇರಾ ಸುತ್ತಲಿನ ಶರಣ ಸೂಫಿ ಸಂತರ ನೆಲೆಗಳು ಲೇಖನದಲ್ಲಿ ಈ ಬಗ್ಗೆ ವಿಸ್ತೃತ ಮಾಹಿತಿ ಇದೆ.</p>.<p>ಗೋಣಿಬಸವೇಶ್ವರರು ಧ್ಯಾನ, ಜಪ, ತಪ ಕೈಗೊಂಡು ಆಧ್ಯಾತ್ಮಿಕ ಶಕ್ತಿ ಪಡೆದುಕೊಂಡಿದ್ದರು. ಇವರು ಕಾಯಕ ಜೀವಿ ಆಗಿದ್ದರು. ಧರ್ಮ ಕಾರ್ಯದ ಜತೆಗೆ ಕೃಷಿಯಲ್ಲೂ ತೊಡಗಿರುತ್ತಿದ್ದರು. ಇವರು ನಡೆಸಿದ ಅನೇಕ ಪವಾಡಗಳ ಬಗ್ಗೆಯೂ ಜನರು ಕತೆಗಳನ್ನು ಹೇಳುತ್ತಾರೆ. ಹೀಗಾಗಿಯೇ ಅಪಾರ ಭಕ್ತವೃಂದ ಸೃಷ್ಟಿಯಾಯಿತು. ಅವರಿಗಾಗಿ ಊರಲ್ಲಿ ಮಠ ನಿರ್ಮಾಣವಾಯಿತು. ಇಲ್ಲಿ ನಿತ್ಯವೂ ಪೂಜೆ, ದಾಸೋಹ ಕೈಗೊಳ್ಳಲಾಗುತ್ತಿತ್ತು. ಅವರು ಜಾತಿಭೇದ ಮಾಡುತ್ತಿರಲಿಲ್ಲ ಎನ್ನುವುದಕ್ಕೆ ಈಗಲೂ ಎಲ್ಲ ಸಮುದಾಯದವರು ಈ ಮಠದ ಭಕ್ತರಾಗಿರುವುದೇ ಸಾಕ್ಷಿಯಾಗಿದೆ.</p>.<p>ಊರಿನ ಪೂರ್ವಕ್ಕೆ ಉತ್ತರಾಭಿಮುಖವಾಗಿ ಈ ಮಠವಿದೆ. ಮಠದಲ್ಲಿನ ಗರ್ಭಗೃಹದ ಮೇಲೆ ಶಿಖರ ಇದೆ. ಒಳಗೆ ಮೂರ್ತಿ ಇದೆ. ಎದುರಿನ ವಿಶಾಲವಾದ ಅಂಗಳಕ್ಕೆ ಆವರಣಗೋಡೆಯಿದೆ. ವಾಡೆಗಿರುವಂಥ ಪ್ರವೇಶದ್ವಾರವಿದೆ. ಪ್ರತಿವರ್ಷ ಶಿವರಾತ್ರಿಗೆ ಮೂರು ದಿನ ಜಾತ್ರೆ ಹಮ್ಮಿಕೊಳ್ಳಲಾಗುತ್ತದೆ. ರಥೋತ್ಸವ ನಡೆಯುತ್ತದೆ. ಕಲ್ಲಿನ ಗಾಲಿಗಳಿರುವ ಕಬ್ಬಿಣದ ಸಲಾಕೆ ಅಳವಡಿಸಿದ ಐದು ಅಂತಸ್ತಿನ ಎತ್ತರದ ರಥವಿದೆ. ಜಾತ್ರೆಯ ಎರಡನೇ ದಿನದಂದು ಪತಾಕೆ, ತಳೀರು–ತೋರಣ ಕಟ್ಟಿ ಸಿಂಗರಿಸಿ ಸಂಜೆಯ ಹೊತ್ತಿಗೆ ರಥ ಎಳೆಯಲಾಗುತ್ತದೆ. ಕೊನೆ ದಿನದಂದು ಕುಸ್ತಿಸ್ಪರ್ಧೆ ನಡೆಯುತ್ತದೆ. ಸುತ್ತಲಿನ ಗ್ರಾಮಗಳ ಅಪಾರ ಭಕ್ತರು ಪಾಲ್ಗೊಳ್ಳುತ್ತಾರೆ.</p>.<p>ವಿಶೇಷವೆಂದರೆ, ಜಾತ್ರೆಯ ಪಲ್ಲಕ್ಕಿ ಮೆರವಣಿಗೆ ಊರಲ್ಲಿ ಸಂಚರಿಸಿದಾಗ ಮುಸ್ಲಿಂ ಭಕ್ತರೊಬ್ಬರ ಮನೆಯಿಂದ ನೂಲಿನಿಂದ ನೇಯ್ದ ಮಂಚ ತರುವ ಸಂಪ್ರದಾಯವಿದೆ. ಇದಲ್ಲದೆ ಪರಿಶಿಷ್ಟರು, ಮುಸ್ಲಿಂ, ಹಿಂದುಳಿದವರು ಒಳಗೊಂಡು ಊರಿನ ಪ್ರತಿಯೊಬ್ಬರೂ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಈ ಕಾರಣ ಮಠವು ಭಾವೈಕ್ಯತೆಯ ಕೇಂದ್ರವಾಗಿದೆ. ‘ಇಲ್ಲಿನ ಜಾತ್ರೆ ಸರ್ವಧರ್ಮ ಸಮನ್ವಯದ ಸಂಕೇತ. ಫೆಬ್ರುವರಿ 19 ರಂದು ಸಂಜೆ ಹಾರಕೂಡ ಚನ್ನವೀರ ಶಿವಾಚಾರ್ಯರು ರಥೋತ್ಸವಕ್ಕೆ ಚಾಲನೆ ನೀಡುವರು. ರಾಜಕೀಯ ಮುಖಂಡರು, ಗಣ್ಯರು ಪಾಲ್ಗೊಳ್ಳುವರು’ ಎಂದು ಸಂಗಯ್ಯ ಸ್ವಾಮಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವಕಲ್ಯಾಣ: ತಾಲ್ಲೂಕಿನ ಬಟಗೇರಾದ ಗೋಣಿ ಬಸವೇಶ್ವರ ಮಠ ಹಳೆಯ ಮತ್ತು ಮಹತ್ವದ ಮಠ-ದೇವಸ್ಥಾನಗಳಲ್ಲಿ ಒಂದಾಗಿದೆ. ಅಪಾರ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಶನಿವಾರದಿಂದ ಮೂರು ದಿನ ಜಾತ್ರೆ ನಡೆಯಲಿದೆ. ಫೆ.19 ಕ್ಕೆ ರಥೋತ್ಸವ ಜರುಗುವುದು.</p>.<p>ಗೋಣಿ ಬಸವೇಶ್ವರರು ಎಲ್ಲಿಯವರು ಮತ್ತು ಯಾವಾಗಿನವರು ಎಂಬುದರ ಬಗ್ಗೆ ಪುರಾವೆಗಳಿಲ್ಲ. ಆದರೆ ಸಮೀಪದ ಪಹಾಡನ ಜಿಂದಾಶಾ ಮದಾರ ಸಾಹೇಬ್ ಅವರ ಒಡನಾಡಿ ಆಗಿದ್ದರು ಎಂಬುದರ ಕುರಿತು ಭಜನೆ ಹಾಡುಗಳು ಮತ್ತು ಜನಪದ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಇವರ ಕಾಲಾವಧಿ 15ನೇ ಶತಮಾನವಾಗಿದೆ. ಏಕೆಂದರೆ ಜಿಂದಾಶಾ ಮದಾರ ಸಾಹೇಬ್ ಒಳಗೊಂಡು ಅನೇಕ ಸೂಫಿ ಸಂತರು ಈ ಭಾಗಕ್ಕೆ ಇದೇ ಕಾಲಾವಧಿಯಲ್ಲಿ ಬಂದಿದ್ದರು. ಡಾ.ಗುರುಲಿಂಗಪ್ಪ ಧಬಾಲೆ ಮತ್ತು ಲಕ್ಷ್ಮಿಕಾಂತ ಪಂಚಾಳ ಸಂಪಾದಿಸಿದ ‘ಸೌಹಾರ್ದ ಪಥ’ ಈ 700 ಪುಟದ ಸಾಂದರ್ಭಿಕ ಗ್ರಂಥದಲ್ಲಿನ ಬಟಗೇರಾ ಸುತ್ತಲಿನ ಶರಣ ಸೂಫಿ ಸಂತರ ನೆಲೆಗಳು ಲೇಖನದಲ್ಲಿ ಈ ಬಗ್ಗೆ ವಿಸ್ತೃತ ಮಾಹಿತಿ ಇದೆ.</p>.<p>ಗೋಣಿಬಸವೇಶ್ವರರು ಧ್ಯಾನ, ಜಪ, ತಪ ಕೈಗೊಂಡು ಆಧ್ಯಾತ್ಮಿಕ ಶಕ್ತಿ ಪಡೆದುಕೊಂಡಿದ್ದರು. ಇವರು ಕಾಯಕ ಜೀವಿ ಆಗಿದ್ದರು. ಧರ್ಮ ಕಾರ್ಯದ ಜತೆಗೆ ಕೃಷಿಯಲ್ಲೂ ತೊಡಗಿರುತ್ತಿದ್ದರು. ಇವರು ನಡೆಸಿದ ಅನೇಕ ಪವಾಡಗಳ ಬಗ್ಗೆಯೂ ಜನರು ಕತೆಗಳನ್ನು ಹೇಳುತ್ತಾರೆ. ಹೀಗಾಗಿಯೇ ಅಪಾರ ಭಕ್ತವೃಂದ ಸೃಷ್ಟಿಯಾಯಿತು. ಅವರಿಗಾಗಿ ಊರಲ್ಲಿ ಮಠ ನಿರ್ಮಾಣವಾಯಿತು. ಇಲ್ಲಿ ನಿತ್ಯವೂ ಪೂಜೆ, ದಾಸೋಹ ಕೈಗೊಳ್ಳಲಾಗುತ್ತಿತ್ತು. ಅವರು ಜಾತಿಭೇದ ಮಾಡುತ್ತಿರಲಿಲ್ಲ ಎನ್ನುವುದಕ್ಕೆ ಈಗಲೂ ಎಲ್ಲ ಸಮುದಾಯದವರು ಈ ಮಠದ ಭಕ್ತರಾಗಿರುವುದೇ ಸಾಕ್ಷಿಯಾಗಿದೆ.</p>.<p>ಊರಿನ ಪೂರ್ವಕ್ಕೆ ಉತ್ತರಾಭಿಮುಖವಾಗಿ ಈ ಮಠವಿದೆ. ಮಠದಲ್ಲಿನ ಗರ್ಭಗೃಹದ ಮೇಲೆ ಶಿಖರ ಇದೆ. ಒಳಗೆ ಮೂರ್ತಿ ಇದೆ. ಎದುರಿನ ವಿಶಾಲವಾದ ಅಂಗಳಕ್ಕೆ ಆವರಣಗೋಡೆಯಿದೆ. ವಾಡೆಗಿರುವಂಥ ಪ್ರವೇಶದ್ವಾರವಿದೆ. ಪ್ರತಿವರ್ಷ ಶಿವರಾತ್ರಿಗೆ ಮೂರು ದಿನ ಜಾತ್ರೆ ಹಮ್ಮಿಕೊಳ್ಳಲಾಗುತ್ತದೆ. ರಥೋತ್ಸವ ನಡೆಯುತ್ತದೆ. ಕಲ್ಲಿನ ಗಾಲಿಗಳಿರುವ ಕಬ್ಬಿಣದ ಸಲಾಕೆ ಅಳವಡಿಸಿದ ಐದು ಅಂತಸ್ತಿನ ಎತ್ತರದ ರಥವಿದೆ. ಜಾತ್ರೆಯ ಎರಡನೇ ದಿನದಂದು ಪತಾಕೆ, ತಳೀರು–ತೋರಣ ಕಟ್ಟಿ ಸಿಂಗರಿಸಿ ಸಂಜೆಯ ಹೊತ್ತಿಗೆ ರಥ ಎಳೆಯಲಾಗುತ್ತದೆ. ಕೊನೆ ದಿನದಂದು ಕುಸ್ತಿಸ್ಪರ್ಧೆ ನಡೆಯುತ್ತದೆ. ಸುತ್ತಲಿನ ಗ್ರಾಮಗಳ ಅಪಾರ ಭಕ್ತರು ಪಾಲ್ಗೊಳ್ಳುತ್ತಾರೆ.</p>.<p>ವಿಶೇಷವೆಂದರೆ, ಜಾತ್ರೆಯ ಪಲ್ಲಕ್ಕಿ ಮೆರವಣಿಗೆ ಊರಲ್ಲಿ ಸಂಚರಿಸಿದಾಗ ಮುಸ್ಲಿಂ ಭಕ್ತರೊಬ್ಬರ ಮನೆಯಿಂದ ನೂಲಿನಿಂದ ನೇಯ್ದ ಮಂಚ ತರುವ ಸಂಪ್ರದಾಯವಿದೆ. ಇದಲ್ಲದೆ ಪರಿಶಿಷ್ಟರು, ಮುಸ್ಲಿಂ, ಹಿಂದುಳಿದವರು ಒಳಗೊಂಡು ಊರಿನ ಪ್ರತಿಯೊಬ್ಬರೂ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಈ ಕಾರಣ ಮಠವು ಭಾವೈಕ್ಯತೆಯ ಕೇಂದ್ರವಾಗಿದೆ. ‘ಇಲ್ಲಿನ ಜಾತ್ರೆ ಸರ್ವಧರ್ಮ ಸಮನ್ವಯದ ಸಂಕೇತ. ಫೆಬ್ರುವರಿ 19 ರಂದು ಸಂಜೆ ಹಾರಕೂಡ ಚನ್ನವೀರ ಶಿವಾಚಾರ್ಯರು ರಥೋತ್ಸವಕ್ಕೆ ಚಾಲನೆ ನೀಡುವರು. ರಾಜಕೀಯ ಮುಖಂಡರು, ಗಣ್ಯರು ಪಾಲ್ಗೊಳ್ಳುವರು’ ಎಂದು ಸಂಗಯ್ಯ ಸ್ವಾಮಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>