ಬೀದರ್: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪಾವನ ಧಾನ ಕೇಂದ್ರದ ಸಹೋದರಿಯರು ಇಲ್ಲಿಯ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದರು.
188 ಪುರುಷ ಕೈದಿಗಳು, 19 ಮಹಿಳಾ ಕೈದಿಗಳು ಹಾಗೂ ಇಬ್ಬರು ಮಕ್ಕಳಿಗೆ ರಾಖಿ ಕಟ್ಟಿ ಪ್ರಸಾದ ವಿತರಿಸಿದರು.
ಕೇಂದ್ರದ ಹಿರಿಯ ಪ್ರವರ್ತಕ ಪ್ರಭಾಕರ ಭಾಯಿ, ಗುರುದೇವಿ ಬಹೆನ್, ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ಮಾತನಾಡಿದರು.
ಅಶೋಕಕುಮಾರ ಬಿರಾದಾರ, ಮಹಾನಂದ ಬಹೆನ್, ಉಷಾ ಬಹೆನ್, ರೇಣುಕಾ ಬಹೆನ್, ವೈಜಿನಾಥ ರಾಗಾ ಇದ್ದರು.