ಜನವಾಡ: ಹೊಲದಲ್ಲಿ ಹಾವು ಕಡಿದು ಮುಖ್ಯ ಶಿಕ್ಷಕರೊಬ್ಬರು ಮೃತಪಟ್ಟಿರುವ ಘಟನೆ ಬೀದರ್ ತಾಲ್ಲೂಕಿನ ಸಿಂದೋಲ್ ತಾಂಡಾದಲ್ಲಿ ಬುಧವಾರ ನಡೆದಿದೆ.
ಕಾಶೆಂಪುರ(ಸಿ) ಗ್ರಾಮದಲ್ಲಿ ಮುಖ್ಯ ಶಿಕ್ಷಕರಾಗಿದ್ದ ವೈಜಿನಾಥ ಗೋಪಿನಾಥ್ (54) ಮೃತಪಟ್ಟವರು.
ವೈಜಿನಾಥ ಅವರು ಎಳ್ಳಮಾವಾಸ್ಯೆ ನಿಮಿತ್ತ ತಮ್ಮ ಸ್ವಗ್ರಾಮ ಸಿಂದೋಲ್ ತಾಂಡಾಗೆ ಹೋಗಿದ್ದಾಗ ಹೊಲದಲ್ಲಿ ಹಾವು ಕಡಿದಿತ್ತು. ತಕ್ಷಣ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.