ಆದರೆ, ಛಲ ಬಿಡದ ಅವರು ನೀಟ್ ತರಬೇತಿಗಾಗಿ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜನ್ನು ಸಂಪರ್ಕಿಸಿದರು. ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ಖದೀರ್ ಅವರು ಶುಲ್ಕದಲ್ಲಿ ರಿಯಾಯಿತಿ ಕಲ್ಪಿಸಿ ನೆರವಾದರು. ಈ ನಡುವೆ ತಂದೆ ಬಸವರಾಜ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಧೃತಿಗೆಟ್ಟಿದ್ದ ವೈಜಿನಾಥ ಅವರಲ್ಲಿ ಆತ್ಮವಿಶ್ವಾಸವನ್ನು ಸಹ ತುಂಬಿದರು. ಗುರಿ ಸಾಧನೆಗೆ ಮಾರ್ಗದರ್ಶನವನ್ನೂ ಮಾಡಿದರು. ಕಠಿಣ ಪರಿಶ್ರಮ ವಹಿಸಿದ ವೈಜಿನಾಥ ಈ ಬಾರಿಯ ನೀಟ್ನಲ್ಲಿ ಉತ್ತಮ ಅಂಕ ಪಡೆದಿದ್ದು, ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆಯಲಿದ್ದಾರೆ.