ಮುಡಬಿ, ಮಂಠಾಳ, ಕೊಹಿನೂರ, ಹುಲಸೂರ, ಬಸವಕಲ್ಯಾಣ ಮತ್ತು ರಾಜೇಶ್ವರ ಹೋಬಳಿಗಳಲ್ಲಿ ಹಾನಿಯಾಗಿದೆ. ಈ ಭಾಗದ ರೈತರು ಮಳೆ ಆಧಾರಿತ ಕೃಷಿ ಕೈಗೊಳ್ಳುತ್ತಾರಾದ್ದರಿಂದ ಇವರಿಗೆ ಮುಂದೆ ಬೆಳೆ ಬೆಳೆಯುವುದಕ್ಕೆ ಪರ್ಯಾಯ ಇಲ್ಲದಂತಾಗಿದೆ. ಆದ್ದರಿಂದ ರೈತಾಪಿ ವರ್ಗ ತೀರ ಸಂಕಟದಲ್ಲಿದೆ. ಈ ಕಾರಣ ಶೀಘ್ರದಲ್ಲಿ ತಾಲ್ಲೂಕಿಗೆ ಭೇಟಿನೀಡಿ ಹಾನಿ ಸಮೀಕ್ಷೆ ಕೈಗೊಳ್ಳಬೇಕು. ತಾಲ್ಲೂಕುವನ್ನು ಹಸಿ ಬರಗಾಲ ಪ್ರದೇಶವೆಂದು ಘೋಷಿಸಬೇಕು ಎಂದು ಅವರು ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.