ಬೀದರ್: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ 59ನೇ ಜನ್ಮದಿನದ ಪ್ರಯುಕ್ತ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕ ಹಾಗೂ ಈಶ್ವರ ಖಂಡ್ರೆ ಅಭಿಮಾನಿಗಳ ಬಳಗದ ಸದಸ್ಯರು ನಗರದ ಪಾಪನಾಶ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಗಮೇಶ ಮೂಲಗೆ ನೇತೃತ್ವದಲ್ಲಿ ಶಿವಲಿಂಗಕ್ಕೆ ಅಭಿಷೇಕ, ಪೂಜೆ ಸಲ್ಲಿಸಿ ಈಶ್ವರ ಖಂಡ್ರೆ ಅವರ ಆಯುಷ್ಯ, ಆರೋಗ್ಯ ಹಾಗೂ ರಾಜಕೀಯ ಉನ್ನತಿಗಾಗಿ ದೇವರಲ್ಲಿ ಪ್ರಾರ್ಥನೆ ಸಮರ್ಪಿಸಿದರು.
ನಂತರ ನೌಬಾದ್ನ ಆಟೊನಗರ ಸಮೀಪ ಅಲೆಮಾರಿ ಕುಟುಂಬಗಳ ಮಕ್ಕಳಿಗೆ ಹಣ್ಣು ಹಂಪಲು, ಬಿಸ್ಕತ್ ವಿತರಿಸಿದರು.
ಕೋವಿಡ್ ಸೋಂಕಿನ ಕಾರಣ ಬಡ, ನಿರ್ಗತಿಕ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ ಹಾಗೂ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಈಶ್ವರ ಖಂಡ್ರೆ ಅವರ ಜನ್ಮದಿನವನ್ನು ಸರಳವಾಗಿ ಆಚರಿಸಲಾಗಿದೆ ಎಂದು ಸಂಗಮೇಶ ಮೂಲಗೆ ತಿಳಿಸಿದರು.
ಪ್ರಮುಖರಾದ ರವಿ ರಾಜಗೀರೆ, ಕೀರ್ತಿವಾನ್ ಭಂಗೂರೆ, ಗೋಪಾಲ್ ದೊಡ್ಡಿ, ರವಿ ಮಾಲ್ದಾರ್, ವಿಜಯ್ ಸಿಂದೋಲ್, ನರಸಿಂಗ ಶೆಟ್ಟೆ, ಸಾಗರ್ ಹೂಗಾರ, ಜ್ಞಾನೇಶ್ವರ ಬಿರಾದಾರ, ಕಾರ್ತಿಕ ಉತ್ತರಗಿ, ಆದಿತ್ಯ ಹೂಗಾರ, ಮೋಹನ್ ಡಾಂಗೆ, ಗಣೇಶ ಮೂಲಗೆ ಇದ್ದರು.
ಕೇಕ್ ಕತ್ತರಿಸಿ ಖಂಡ್ರೆ ಜನ್ಮದಿನ ಆಚರಣೆ
ಬೀದರ್: ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ ಹಾಗೂ ಈಶ್ವರ ಖಂಡ್ರೆ ಅಭಿಮಾನಿಗಳ ಬಳಗದ ವತಿಯಿಂದ ಬಸವಕಲ್ಯಾಣದ ಸಂತ ಅಂತೋಣಿ ಬಾಲ ಕಲ್ಯಾಣ ಆಶ್ರಮದಲ್ಲಿ ಕೇಕ್ ಕತ್ತರಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ 59ನೇ ಜನ್ಮದಿನ ಆಚರಿಸಲಾಯಿತು.
ಆಶ್ರಮದ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ನಗರಸಭೆ ಸದಸ್ಯ ಭೀಮಷಾ ಫುಲೆ, ಕಾಂಗ್ರೆಸ್ ಮುಖಂಡರಾದ ಸೋಮನಾಥ ರಾಜೋಳೆ, ಸಂಗಮೇಶ ಹುಣಸಗೇರೆ, ಬಸವರಾಜ ಸ್ವಾಮಿ, ವಿಕಾಸ ಮುಚಳಂಬೆ, ಅಮರ ಪಾಟೀಲ, ವೀರೇಶ ಕೊಡಂಬಲೆ ಇದ್ದರು.