ಗಾಂಧೀಜಿಯವರು ಆಗಾಗ್ಗೆ ಮೌನವಾಗಿದ್ದು ಅಂತರಂಗದ ವಿಕಾಸ ಮಾಡಿಕೊಳ್ಳುತ್ತಿದ್ದರು. ಮಾತು ಕೃತಿ ಒಂದಾಗಿರಬೇಕು. `ನಡೆಯೊಳಗೆ ನುಡಿ ತುಂಬಿ ನುಡಿಯೊಳಗೆ ನಡೆ ತುಂಬಿ ನಡೆ-ನುಡಿ ಎರಡು ಪರಿಣಾಮದಲ್ಲಿ ತುಂಬಿ, ಲಿಂಗ ಕೂಡಬಲ್ಲಾತನೆ ಶರಣ”. ನಮ್ಮಿಂದ ಒಳ್ಳೆಯ ಮಾತನ್ನು ಸಾಧ್ಯವಾಗಬೇಕಾದರೆ ಒಳ್ಳೆಯ ಮೌನ ಸಾಧನೆಯಾಗಬೇಕು. ಅಂದೆ ಹುಟ್ಟಿ ಅಂದೆ ಸಾಯುವ ಮಾತುಗಳು ಬೆಳೆಯುವುದು ಇಲ್ಲ. ಅದರಿಂದ ಯಾವ ಫಲವು ಲಭಿಸುವುದಿಲ್ಲ. ಅರಿತು ಆಡಿದ ಶರಣರ, ಸಂತರ, ಮಹಾತ್ಮರ ಮಾತುಗಳು ನಿರಂತರ ನಿತ್ಯನೂತನವಾಗಿವೆ. ನಿತ್ಯ ಸತ್ಯವಾಗಿರುತ್ತವೆ.