ಚಿಟಗುಪ್ಪ: ‘ದೈಹಿಕ ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕ ಸಾಮರ್ಥ್ಯ ವೃದ್ಧಿಸುತ್ತದೆ’ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಚಪ್ಪ ಮಠಪತಿ ಹೇಳಿದರು.
ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದ ಗುರುನಾನಕ್ ಪಬ್ಲಿಕ್ ಶಾಲೆಯಲ್ಲಿ ನಡೆದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಿಂದ ಜೀವನದಲ್ಲಿ ಶಿಸ್ತು, ಸಂಯಮ ಹೆಚ್ಚುತ್ತದೆ. ಆರೋಗ್ಯವಂತ ವ್ಯಕ್ತಿಯಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.
ಗುರುನಾನಕ ಪಬ್ಲಿಕ್ ಶಾಲೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಮಾತನಾಡಿ,‘ಶಿಕ್ಷಕರು, ಪಾಲಕರು ಮಕ್ಕಳ ಆಸಕ್ತಿಗೆ ತಕ್ಕ ಶಿಕ್ಷಣ ಒದಗಿಸಬೇಕು. ಅಂದಾಗ ಮಾತ್ರ ನಿಜವಾದ ಪ್ರತಿಭಾನ್ವಿತರು ಬೆಳೆಯುತ್ತಾರೆ’ ಎಂದರು.
ಪ್ರಾಚಾರ್ಯ ಇನಾಯತ್ ಪಾಶಾ, ಸಿಬ್ಬಂದಿ, ಪಾಲಕರು ಹಾಗೂ ಗಣ್ಯರು ಇದ್ದರು.