ಔರಾದ್: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ ಗೊಂಡ ಕಾರಣ ತಾಲ್ಲೂಕಿನ ಡಾಕು ತಾಂಡಾದವಿದ್ಯಾರ್ಥಿನಿ ಬಬಿತಾ (16) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈಕೆ ತಾಲ್ಲೂಕಿನ ವಡಗಾಂವ್ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಳು.
‘ಮಧ್ಯಾಹ್ನ ಪರೀಕ್ಷೆ ಫಲಿತಾಂಶ ಬಂದ ಕೂಡಲೇ ಮನೆಗೆ ಬಂದು ಕೋಣೆಯೊಳಗೆ ಸೇರಿ ನೇಣು ಹಾಕಿಕೊಂಡಿದ್ದಾಳೆ. ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದಾಳೆ’ ಎಂದು ವಡಗಾಂವ್ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಹಣಮಂತರಾವ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.