ಬೀದರ್: ಶಿಕ್ಷಣದಲ್ಲಿ ಭಾರತೀಯತೆ ಕಾರ್ಯರೂಪಕ್ಕೆ ತರುವ ದಿಸೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ ಎಂದು ಭಾರತೀಯ ಶಿಕ್ಷಣ ಮಂಡಲದ ಕಲಬುರ್ಗಿ ವಿಭಾಗ ಪ್ರಮುಖರಾದ ಡಾ. ಪಲ್ಲವಿ ಪಾಟೀಲ ಹೇಳಿದರು.
ಭಾರತೀಯ ಶಿಕ್ಷಣ ಮಂಡಲದ ಜಿಲ್ಲಾ ಘಟಕದ ವತಿಯಿಂದ ಇಲ್ಲಿಯ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಕಚೇರಿಯಲ್ಲಿ ಆಯೋಜಿಸಿದ್ದ ಸದಸ್ಯತ್ವ ಪೂರ್ವಭಾವಿ ಸಭೆ ಹಾಗೂ ಶೈಕ್ಷಣಿಕ ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಕಾರ್ಯದರ್ಶಿ ಹನುಮಂತರಾವ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾಗೇಶ, ಭಾರತೀಯ ಶಿಕ್ಷಣ ಮಂಡಲದ ಜಿಲ್ಲಾ ಘಟಕದ ಪ್ರಮುಖರಾದ ಪ್ರತಿಭಾ ಚಾಮಾ, ಸಂಯೋಜಕ ಮಲ್ಲಿನಾಥ ಮಠಪತಿ ಉಪಸ್ಥಿತರಿದ್ದರು. ಬಾಲಾಜಿ ರಾಠೋಡ್ ನಿರೂಪಿಸಿದರು. ಅರ್ಚನಾ ಸಿರಿಗೇರಿ ವಂದಿಸಿದರು.