ಲೇಖಕರು ಉದ್ದೇಶಪೂರ್ವಕವಾಗಿಯೇ ಬಸವೇಶ್ವರರ ಇತಿಹಾಸ ತಿರುಚಿ ಬಸವ ಭಕ್ತರಿಗೆ ನೋವು ಉಂಟು ಮಾಡಿದ್ದಾರೆ. ಸರ್ಕಾರ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕವನ್ನು ತಕ್ಷಣ ವಾಪಸ್ ಪಡೆಯಬೇಕು. ಇತಿಹಾಸ ತಿರುಚಿದ ಲೇಖಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಲ್ಲ ಲೋಪ, ದೋಷಗಳನ್ನು ಸರಿಪಡಿಸಿ, ಬಸವೇಶ್ವರರ ವಾಸ್ತವ ಇತಿಹಾಸದ ಪಾಠ ಅಳವಡಿಸಿ, ಪಠ್ಯ ಪುಸ್ತಕದ ಮರು ಮುದ್ರಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.